ದುಬೈನಲ್ಲಿ ಭೀಕರ ಅಪಘಾತ; ಕರ್ನಾಟಕದ 6 ಮಂದಿ ಸಾವು
ದುಬೈನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ 6 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರು (Bengaluru): ದುಬೈನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ 6 ಮಂದಿ ಸಾವನ್ನಪ್ಪಿದ್ದಾರೆ. ದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿ ಸಾವು, 14ರಂದು ಪತ್ನಿ, ಮಕ್ಕಳು ಹಾಗೂ ತಾಯಿ ಬೇಬಿ ಜಾನ್ (64) ಜತೆ ಶಬಿ ಮೆಕ್ಕಾಗೆ ತೆರಳಿದ್ದರು. ಎನ್ನಲಾಗಿದೆ. ನಿನ್ನೆ ದುಬೈನಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಕಂಟೈನರ್ ಲಾರಿ ಹಾಗೂ ಅವರು ಪ್ರಯಾಣಿಸುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬಸ್ಗೆ ತೀವ್ರ ಹಾನಿಯಾಗಿದೆ. ಶಬಿ, ಆತನ ತಾಯಿ ಬೇಬಿ ಜಾನ್, ಪತ್ನಿ ಸಿರಾಜ್ ಬೇಗಂ ಹಾಗೂ ಮಗಳು ಶಿಬಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಬಿ ಅವರ ಪುತ್ರ ಸಮೀರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನೆಯಲ್ಲಿ ರಾಯಚೂರಿನ 4 ಮಂದಿ ಹಾಗೂ ಕರ್ನಾಟಕದ 6 ಮಂದಿ ಸೇರಿದಂತೆ ಕಲಬುರಗಿ ಮತ್ತು ಯಾದಗಿರಿಯ ತಲಾ ಒಬ್ಬರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉಳಿದ ಇಬ್ಬರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ದುಬೈನಲ್ಲಿ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ 6 ಮಂದಿ ಸಾವನ್ನಪ್ಪಿರುವ ಘಟನೆ ಭಾರೀ ದುರಂತಕ್ಕೆ ಕಾರಣವಾಗಿದೆ.
ಒಂದೇ ಕುಟುಂಬದ 4 ಮಂದಿಯ ಅಂತಿಮ ಸಂಸ್ಕಾರವನ್ನು ದುಬೈನಲ್ಲಿ ನಡೆಸಲು ಸಂಬಂಧಿಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
6 people from Karnataka died in accident of Dubai
Follow us On
Google News |
Advertisement