ಮಾಂಸ ತಿಂದಿದ್ದು ಸತ್ಯ ಆದರೆ ಸಿಟಿ ರವಿ ದೇವಸ್ಥಾನ ಪ್ರವೇಶಿಸಲಿಲ್ಲ; ನಳಿನ್ ಕುಮಾರ್ ಕಟೀಲ್
ಮಾಂಸ ತಿಂದಿದ್ದು ನಿಜ, ಆದರೆ ಸಿಟಿ ರವಿ ದೇವಸ್ಥಾನ ಪ್ರವೇಶಿಸಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರು (Bengaluru): ಮಾಂಸ ತಿಂದಿದ್ದು ನಿಜ, ಆದರೆ ಸಿಟಿ ರವಿ ದೇವಸ್ಥಾನ ಪ್ರವೇಶಿಸಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ..
ನಮ್ಮ ಪಕ್ಷದ ಶಾಸಕ ಸಿಟಿ ರವಿ ಅವರು ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿವಾದ ಸೃಷ್ಟಿಸುತ್ತಿದ್ದಾರೆ. ಈ ವಿಚಾರವಾಗಿ ಸ್ವತಃ ಸಿಟಿ ರವಿ ಅವರೇ ವಿವರಣೆ ನೀಡಿದ್ದಾರೆ.
ಮಾಂಸ ತಿಂದಿದ್ದು ನಿಜ. ಆದರೆ ಸಿಟಿ ರವಿ ಆಂಜನೇಯ ದೇವಸ್ಥಾನದ ಒಳಗೆ ಹೋಗಿರಲಿಲ್ಲ. ದೇವಸ್ಥಾನದ ಹೊರಗೆ ನಿಂತು ದರ್ಶನ ಪಡೆದರು. ಸಿಟಿ ರವಿಗೂ ಸಿದ್ದರಾಮಯ್ಯ ವಿಚಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ನೇರವಾಗಿ ಧರ್ಮಸ್ಥಳದ ದೇವಸ್ಥಾನಕ್ಕೆ ತೆರಳಿದ್ದರು.
ಸಿಟಿ ರವಿ ಭೇಟಿ ನೀಡಿದ ದೇವಸ್ಥಾನವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ದೇವಸ್ಥಾನದ ಹೊರಗೆ ಬೀಗವನ್ನೂ ಹಾಕಲಾಗಿತ್ತು. ಹಾಗಾಗಿ ಸಿಟಿ ರವಿ ದೇವಸ್ಥಾನಕ್ಕೆ ಹೋಗದೆ ದರ್ಶನ ಮಾಡಿದ್ದು, ಸಿದ್ದರಾಮಯ್ಯ ದೇವಸ್ಥಾನದ ಒಳಗೆ ಹೋಗಿದ್ದಾರೆ, ಎರಡೂ ಘಟನೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ.
ಹೊಸದಾಗಿ ಪಕ್ಷ ಆರಂಭಿಸಿರುವ ಜನಾರ್ದನ ರೆಡ್ಡಿ ಅವರನ್ನು ಅಮಿತ್ ಶಾ ನೋಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
Eating meat is true but CT Ravi did not enter the temple, Says Nalin Kumar Katil
Follow us On
Google News |
Advertisement