ತಾಯಿ ಸಾವಿನಿಂದ ಮನನೊಂದ ಮಗ, ಬಿಎಂಡಬ್ಲ್ಯು ಕಾರನ್ನು ನದಿಗೆ ದೂಡಿದ !
ತಾಯಿಯ ಸಾವಿನಿಂದ ಮನನೊಂದ ಮಗ 1.3 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ನದಿಗೆ ಎಸೆದಿದ್ದಾನೆ
ಬೆಂಗಳೂರು (Bengaluru): ತಾಯಿಯ ಸಾವಿನಿಂದ ಮನನೊಂದ ಮಗನೊಬ್ಬ 1.3 ಕೋಟಿ ಮೌಲ್ಯದ (Bmw Car In Cauvery River) ಬಿಎಂಡಬ್ಲ್ಯು ಕಾರನ್ನು ನದಿಗೆ ಎಸೆದಿದ್ದಾನೆ. ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಸಮೀಪದ ಗ್ರಾಮಸ್ಥರು ಮತ್ತು ಮೀನುಗಾರರು ಕಾವೇರಿ ನದಿಯಲ್ಲಿ ತೇಲುತ್ತಿರುವ ದುಬಾರಿ ಕೆಂಪು ಕಾರನ್ನು ಗುರುತಿಸಿ, ಆಕಸ್ಮಿಕವಾಗಿ ಯಾರೋ ಕಾರು ಸೇರಿದಂತೆ ನದಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪೊಲೀಸರು ಕೂಡ ಇದೇ ರೀತಿ ಅನುಮಾನ ವ್ಯಕ್ತಪಡಿಸಿದ್ದು, ತಕ್ಷಣ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಹಿಸಿಕೊಂಡಿದ್ದಾರೆ. ಆದರೆ, ನದಿಯಲ್ಲಿ ತೇಲುತ್ತಿದ್ದ ಕಾರಿನ ಬಳಿ ಹೋದ ಗಜ ಈಜುಗಾರರು ಅದರಲ್ಲಿ ಯಾರೂ ಇಲ್ಲದಿರುವುದನ್ನು ಕಂಡುಕೊಂಡಿದ್ದಾರೆ. ಅಂತಿಮವಾಗಿ ಕಾರನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ನಂತರ ಪೊಲೀಸರು ನಂಬರ್ ಆಧರಿಸಿ ಕಾರಿನ ಮಾಲೀಕರನ್ನು ಗುರುತಿಸಿದ್ದಾರೆ. ಬೆಂಗಳೂರಿನಲ್ಲಿ ತಂಗಿದ್ದ ವ್ಯಕ್ತಿಯನ್ನು ಶ್ರೀರಂಗಪಟ್ಟಣಕ್ಕೆ ಕರೆಸಲಾಗಿತ್ತು. ಕಾರು ನದಿಗೆ ಬಿದ್ದಿರುವ ಬಗ್ಗೆ ವಿಚಾರಿಸಲಾಯಿತು.
ಆದಾಗ್ಯೂ ಆತ ಆ ವೇಳೆ ಅಸ್ಪಷ್ಟ ಉತ್ತರಗಳನ್ನು ನೀಡಿದ್ದ, ಆ ವ್ಯಕ್ತಿ ಹೇಳುತ್ತಿರುವುದು ಪೊಲೀಸರಿಗೆ ನಂಬಲರ್ಹವಾಗಿ ಕಾಣಲಿಲ್ಲ. ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಯಿತು. ಅವರು ನಿಜವಾದ ವಿಷಯವನ್ನು ಹೇಳಿದರು.
ತಿಂಗಳ ಹಿಂದೆ ತಾಯಿ ನಿಧನದಿಂದ ದುಃಖಿತನಾಗಿದ್ದ ಎಂಬ ವಿಷಯವನ್ನು ತಿಳಿಸಿದ್ದಾರೆ. ತಾಯಿಯ ಅಗಲಿಕೆ ಸಹಿಸದೆ ಕಾರನ್ನು ನದಿಗೆ ದುಡಿದ್ದಾನೆಂದು ತಿಳಿಸಿದ್ದಾರೆ. ಕಾರನ್ನು ನದಿಗೆ ದೂಡಿದ ಬಳಿಕ ಬೆಂಗಳೂರಿಗೆ ವಾಪಸಾಗಿದ್ದ…. ಇದರೊಂದಿಗೆ ಆತನ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೊಲೀಸರು ಯಾವುದೇ ದಂಡ ವಿಧಿಸದೆ ಬಿಟ್ಟಿದ್ದಾರೆ.
ಮತ್ತೊಂದೆಡೆ, ಘಟನೆಯ ನಂತರ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Depressed Over Mothers Death Bengaluru Man Dumps Rs 1 3 Cr Bmw Car In Cauvery River
Follow us On
Google News |