Bengaluru Power Cut: ಇಂದು ಮತ್ತು ನಾಳೆ ಬೆಂಗಳೂರು ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Bengaluru Power Cut: ಬೆಂಗಳೂರು ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲಿ ನಿರ್ವಹಣಾ ಕಾಮಗಾರಿಯಿಂದ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.
Bengaluru Power Cut: ಬೆಂಗಳೂರು ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲಿ ನಿರ್ವಹಣಾ ಕಾಮಗಾರಿಯಿಂದ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.
ಈ ಕುರಿತು ಬೆಸ್ಕಾಂ ವಿದ್ಯುತ್ ಮಂಡಳಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು:-
22 ರಂದು (ಇಂದು) ಮತ್ತು 23 ರಂದು (ನಾಳೆ) ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ನಡೆಯಲಿದೆ. ಹಾಗಾಗಿ ವಿಜಯನಗರ ಸೇರಿದಂತೆ ರಾಜಾಜಿನಗರದ ವಿವಿಧ ಪ್ರದೇಶಗಳು, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್, ಅಮರಜ್ಯೋತಿ ನಗರ, ಸುಬ್ರಮಣ್ಯ ನಗರ, ದಾಸರಹಳ್ಳಿ, ಇಂದಿರಾನಗರ, ಟೆಲಿಕಾಂ ಲೇಔಟ್, ಆರ್.ಪಿ.ಸಿ. ಲೇ-ಔಟ್, ಹಂಪಿನಗರ, ಅಗ್ರಹಾರ, ಚಂದ್ರಾ ಲೇ-ಔಟ್, ಮೈಸೂರು ರಸ್ತೆ ಜಂಕ್ಷನ್, ಸುತ್ತಮುತ್ತಲ, ಆರ್.ಆರ್.ನಗರ, ನಾಯಂಡಹಳ್ಳಿ, ಬ್ಯಾಟರಾಯನಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ.
ರಾಜಾಜಿನಗರ 62ನೇ ಕ್ರಾಸ್
ಅದೇ ರೀತಿ ನಾಳೆ (ಗುರುವಾರ) ಅಮರಜ್ಯೋತಿ ನಗರ, ಸರಸ್ವತಿ ನಗರ, ಅಗ್ರಹಾರ, ಇಂದಿರಾನಗರ, ಶಂಕರಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇಲಿನ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಜಾರಿಯಲ್ಲಿರುತ್ತದೆ.
Power Cut in Bengaluru Rajajinagar and other areas today and tomorrow
Follow us On
Google News |
Advertisement