ಕೇಂದ್ರ ಸಚಿವರ ವಿರುದ್ಧ DSS ಕಪ್ಪುಬಾವುಟ
DSS organization were shown black flags and arrested
ಬೆಳಗಾವಿ-(itskannada): ಕೇಂದ್ರ ಸಚಿವರ ವಿರುದ್ಧ DSS ಕಪ್ಪುಬಾವುಟ ಪ್ರದರ್ಶಿಸಿ ಬಂಧನಕ್ಕೊಳಗಾದರು : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಬೆಳಗಾವಿ ಡಿ ಎಸ್ ಎಸ್ ಸಂಘಟನೆಯ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಲು ಯತ್ನಿಸಿ ಬಂಧನಕ್ಕೊಳಗಾದರು.
ಕೇಂದ್ರ ಸಚಿವರ ವಿರುದ್ಧ DSS ಕಪ್ಪುಬಾವುಟ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಕಾಯ್ದಿದ್ದ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಹಿಡಿದು ಕಾರಿಗೆ ಅಡ್ಡ ಬರುತ್ತಿದ್ದಂತೆ ಎಸಿಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಕಾರ್ಯಕರ್ತರನ್ನು ತಡೆಯಲಾಯಿತು.
ಆಕ್ರೋಶದಿಂದ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ್ದರಿಂದ ಒಟ್ಟಾದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ, ನೂಕು ನುಗ್ಗಲು ವ್ಯಕ್ತವಾಯಿತು.
ಚನ್ನಮ್ಮ ವೃತ್ತದಲ್ಲಿ ಎಲ್ಲ ದಲಿತಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಜೆ ಪಡೆದ ಪೊಲೀಸರು ಬಸ್ಸಿನಲ್ಲಿ ದೂರ ಕರೆದೊಯ್ದು ಬಿಡುಗಡೆಗೊಳಿಸಿದರು. ಸಚಿವರ ಕಾರ್ಯಕ್ರಮ ಸ್ಥಳವಾದ ಕನ್ನಡ ಸಾಹಿತ್ಯ ಭವನದಲ್ಲಿ ಭಾರಿ ಬಂದೊಬಸ್ತ್ ಹಾಕಲಾಗಿತ್ತು. ಡಿಸಿಪಿ ಸೀಮಾ ಲಾಟಕರ ಭದ್ರತಾ ಹೊಣೆ ಹೊತ್ತು ಪರಿಶೀಲಿಸಿದರು. | itskannada Crime
ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News
Follow us On
Google News |