ಪಾಪಿ ತಂದೆಯ ದುಷ್ಕೃತ್ಯ, ಮಗನ ಕೊಲೆಗೆ ಸುಪಾರಿಕೊಟ್ಟ ಅಪ್ಪ
ತಂದೆಯೇ ಮಗನ ಹತ್ಯೆಯ ಮಾಸ್ಟರ್ ಮೈಂಡ್
ಪಾಪಿ ತಂದೆಯೊಬ್ಬ ತನ್ನ ಮಗನನ್ನು ಕೊಲ್ಲಲು ಸುಪಾರಿಕೊಟ್ಟ ದಾರುಣ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಾಪಿ ತಂದೆಯೇ ರಕ್ತಸಿಕ್ತ ಮಗನನ್ನು ಕಣ್ಣಾರೆ ಕಂಡು ವಿಕೃತಿ ಮೆರೆದಿದ್ದಾನೆ.. ಆದರೆ ವ್ಯಾಘ್ರ ತಂದೆಯ ದುಷ್ಕೃತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಸದ್ಯ ಆರೋಪಿ ಪೋಲೀಸರ ಅತಿಥಿಯಾಗಿದ್ದಾನೆ.
ಆಗಸ್ಟ್ 27 ರ ರಾತ್ರಿ ಚೆನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ಪುನೀತ್ (26) ಎಂಬ ಯುವಕನನ್ನು ಕೆಲವು ಕೊಲೆಗಡುಕರು ಕೊಂದಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಆರು ಜನರನ್ನುಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧನಕ್ಕೊಳಗಾದವರಲ್ಲಿ ಪುನೀತ್ ತಂದೆ ಹೇಮಂತ್ ಕೂಡ ಇದ್ದಾನೆ, ಆತನೇ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಪೊಲೀಸರು ಗುರುತಿಸಿದ್ದಾರೆ. ಜೊತೆಗೆ ಕಾಂತರಾಜು, ಪ್ರಶಾಂತ್, ಸುನಿಲ್, ನಂದಿಶಾ, ನಾಗರಾಜ್ ಸುಪಾರಿ ಕೊಲೆಗಾರರು. ನಾಲ್ಕೂವರೆ ತಿಂಗಳ ಹಿಂದೆ ಮಗನನ್ನು ಕೊಲ್ಲಲು 2 ಲಕ್ಷ ರೂ. ಸುಪಾರಿ ಯೋಜಿಸಿದ್ದ ತಂದೆ ಹೇಮಂತ್, ಕೊಲೆ ಗ್ಯಾಂಗ್ಗೆ 2 ಲಕ್ಷ ರೂ. ನೀಡಿದ್ದ.
ಮಗನ ಹತ್ಯೆಯಿಂದ ತಾಯಿ ಯಶೋದಮ್ಮ ಕಂಗಾಲಾಗಿದ್ದಾಳೆ. ಹಾಗೂ ಆಕೆ ಚನ್ನಾರಾಯಣಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹೇಮಂತ್ ಮತ್ತು ಅವರ ಪುತ್ರ ಪುನೀತ್ ನಡುವೆ ಆಸ್ತಿ ವರ್ಗಾವಣೆಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಹೇಮಂತ್ನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, 1.88 ಲಕ್ಷ ರೂ. ನಗದು ಮತ್ತು 5 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
Follow us On
Google News |