Bagalkot, ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ !
ಬಾಗಲಕೋಟೆಯ (Bagalkot) ನವನಗರದಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ (retired judge) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಮಾನಪ್ಪ ತಳವಾರ (53) (Manappa Talavalr) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಜಡ್ಜ್ (retired judge of the Chittapura court) ಎನ್ನಲಾಗಿದೆ..
ಮೃತರು ಬಾಗಲಕೋಟೆ ನವನಗರ ಸೆಕ್ಟರ್ 16 ರ ಮನೆಯಲ್ಲಿ ವಾಸವಾಗಿದ್ದರು (committed suicide at Bagalkot house). ಈ ಹಿಂದೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕಡ್ಡಾಯ ನಿವೃತ್ತಿಯ ಮೇಲಿದ್ದರು ಎನ್ನಲಾಗಿದೆ.. ಮೃತ ಜಡ್ಜ್ ಗೆ ಇಬ್ಬರು ಪತ್ನಿಯರು ಎನ್ನುವ ಮಾಹಿತಿ ಲಭ್ಯವಾಗಿದೆ.
ಅವರು ಮೂಲತ ಬಾಗಲಕೋಟೆ ತಾಲೂಕಿನ ಶೇಲ್ಲಿಕೇರಿ ಗ್ರಾಮದವರಾಗಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಿಪಿಐ ವಿಜಯಕುಮಾರ್ ಮುರಗುಂಡಿ, ಸಿಪಿಐ ಎಸ್.ಎಂ.ಆವಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೃತ ಜಡ್ಜ್ ನ ಸ್ನೇಹಿತ (retired judge Friend) ವಾಯ್ ಆರ್ ಮಕಾಣಿ ಮಾತನಾಡಿ ನನ್ನ ಆತ್ಮೀಯ ಗೆಳೆಯ ಒಳ್ಳೆಯ ಸೌಮ್ಯ ಸ್ವಭಾವದ ವ್ಯಕ್ತಿ ಇವತ್ತು ಈತನ ಕಳೆದುಕೊಂಡಿದಕ್ಕೆ ನಮಗೆ ಬಹಳ ನೋವಾಗಿದೆ. ತನ್ನ ಜೀವನದಲ್ಲಿ ಏನು ಸಾಧಿಸಬೇಕು ಅಂತ ಅಂದುಕೊಂಡಿದ್ದರು ಎಲ್ಲವನ್ನು ಸಾಧಿಸಿದರು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದರು..
ಇದನ್ನೂ ಓದಿ : ಧಾರವಾಡದಲ್ಲಿ ಭೀಕರ ಅಪಘಾತ, ಸಾವಿನ ಸಂಖ್ಯೆ 9 ಕ್ಕೆ ಏರಿಕೆ
ಪ್ರತಿದಿನವೂ ನನಗೆ ಕರೆ ಮಾಡುತ್ತಿದ್ದರು. ಇವತ್ತು ಬೆಳಿಗ್ಗೆ 10:30ಕ್ಕೆ ಮನೆಯಲ್ಲಿ ಭೇಟಿಯಾಗಿ ನನಗೆ ತೋಟದ ಕೆಲಸವಿದೆ ಅಂತ ಹೇಳಿ ಹೊದೆ. ಸಾಯಂಕಾಲದವರೆಗೂ ಅವರಿಂದ ನನಗೆ ಮರಳಿ ಫೋನ್ ಬರಲಿಲ್ಲ ಅಂತ ಹೇಳಿದರು.
ಬಾಗಲಕೋಟೆ ಜಿಲ್ಲೆಯ ನವನಗರ ಪೋಲಿಸ್ ಠಾಣಾ (Bagalkot Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯಕ್ಕೆ ತನಿಖೆ ಮುಂದುವರೆದಿದೆ.
retired judge of the Chittapura court committed suicide at Bagalkot house