ಯಶವಂತಪುರ ಲಾಡ್ಜ್ನಲ್ಲಿ ಮಹಿಳೆ ಕತ್ತು ಹಿಸುಕಿ ಕೊಲೆ
ಯಶವಂತಪುರದ ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಕೊಲೆಯ ಹಿಂದೆ ಪ್ರೇಮಿಯೇ ಶಂಕಿತ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು (Bengaluru): ಯಶವಂತಪುರದ (Yeshwanthpur) ಲಾಡ್ಜ್ನಲ್ಲಿ ಶವವಾಗಿ (Found Dead Body) ಪತ್ತೆಯಾದ ಮಹಿಳೆ ಕೊಲೆಯ ಹಿಂದೆ ಪ್ರೇಮಿಯೇ ಶಂಕಿತ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮೂಲದ ದೀಪಾ ಪದಂ (32) ಎಂಬಾಕೆಯ ಶವ ಜೂನ್ 10 ರಂದು ಲಾಡ್ಜ್ ಸಿಬ್ಬಂದಿಗೆ ಪತ್ತೆಯಾಗಿತ್ತು. ಆರೋಪಿಯನ್ನು ಅನ್ಮಲ್ ರತನ್ ಕಂದರ್ ಎಂದು ಗುರುತಿಸಲಾಗಿದೆ.
ಅನ್ಮಲ್ ರತನ್ ಕಂದರ್ ಅವರು ಕೆಲವು ವರ್ಷಗಳ ಹಿಂದೆ ದೀಪಾಲಿಯನ್ನು ಮದುವೆಯಾಗಿದ್ದರು ಮತ್ತು ಬೆಂಗಳೂರಿನ ಎಚ್ಎಎಲ್ ಬಳಿ ವಾಸಿಸುತ್ತಿದ್ದರು. ಆತ ಬಾಟಾ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದೀಪಾಲಿಯ ಸ್ನೇಹಿತೆಯಾಗಿದ್ದ ದೀಪಾ ಜೊತೆ ಅನ್ಮಲ್ ವಿವಾಹೇತರ ಸಂಬಂಧ ಹೊಂದಿದ್ದ. ಅವನು ತನ್ನ ಕೆಲಸದ ಸ್ಥಳದಲ್ಲಿ ಅವಳ ಹೆಸರನ್ನು ಒಂದು ಹುದ್ದೆಗೆ ಶಿಫಾರಸು ಮಾಡಿದ್ದನು. ದೀಪಾ ಮತ್ತೋರ್ವ ಯುವಕನೊಂದಿಗೆ ಸಂಬಂಧ ಆರಂಭಿಸಿದ್ದು, ಇದು ಅನ್ಮಲ್ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಜೂನ್ 9 ರಂದು ಅನ್ಮಲ್ ಅವರು ದೀಪಾ ಅವರನ್ನು ಯಶವಂತಪುರ ರೈಲು ನಿಲ್ದಾಣದ ಬಳಿಯ ಲಾಡ್ಜ್ಗೆ ಕರೆದೊಯ್ದಿದ್ದನು. ದೀಪಾ ಅವರ ಅನೈತಿಕ ಸಂಬಂಧದ ವಿಚಾರವಾಗಿ ಅವರಿಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಅನ್ಮಲ್ ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯ ನಂತರ ಅನ್ಮಲ್ ಕೊಠಡಿಗೆ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮರುದಿನ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೊಠಡಿ ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಲಾಡ್ಜ್ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.
Woman found death at lodge in Yeshwanthpur
Follow Us on : Google News | Facebook | Twitter | YouTube