Bengaluru Crime News: ಕದ್ದ ವಸ್ತುಗಳನ್ನು ದೇವಸ್ಥಾನಕ್ಕೆ ಅರ್ಪಿಸಿದ ಯುವಕ
ಮಾಜಿ ಮಾಲೀಕನ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣ ಮತ್ತು ಹಣದ ಒಂದು ಭಾಗವನ್ನು ಯುವಕ ದೇವಸ್ಥಾನಕ್ಕೆ ದಾನ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ಬೆಂಗಳೂರು (Bengaluru): ಮಾಜಿ ಮಾಲೀಕನ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣ ಮತ್ತು ಹಣದ ಒಂದು ಭಾಗವನ್ನು ಯುವಕ (Youth) ದೇವಸ್ಥಾನಕ್ಕೆ (Temple) ದಾನ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ಬೆಂಗಳೂರು ಅಶೋಕನಗರ ಪೊಲೀಸರು (Bangalore Ashok Nagar Police) ಕಳ್ಳತನ ಪ್ರಕರಣಗಳಲ್ಲಿ (Theft Case) ಭಾಗಿಯಾಗಿದ್ದ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿದಾಗ ಆತನನ್ನು ಮಂಜುನಾಥ್ (28) ಅಲಿಯಾಸ್ ಜಾನ್ ಎಂದು ಗುರುತಿಸಲಾಗಿದೆ.
ಮೊದಲಿಗೆ, ಜಾನ್ ಓರ್ವ ವ್ಯಕ್ತಿ ಬಳಿ ಕೆಲಸ ಮಾಡುತ್ತಿದ್ದ. ಆ ವ್ಯಕ್ತಿ ಜಾನ್ನ ಸಂಬಳವನ್ನು ಹೆಚ್ಚಿಸಲಿಲ್ಲ. ಮಾಸಿಕ ವೇತನ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಮಾಲೀಕರು ಹೆಚ್ಚಿಸಿಲ್ಲ. ಇದರಿಂದ ಮಾಲೀಕರೊಂದಿಗೆ ಜಗಳವಾಡಿ ಕೆಲಸ ಬಿಟ್ಟಿದ್ದ. ಬಳಿಕ ಅಶೋಕನಗರದಲ್ಲಿರುವ ಮಾಲೀಕರ ಮನೆಗೆ ತೆರಳಿದ ಜಾನ್ 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದನು.
ಕದ್ದ ಚಿನ್ನಾಭರಣ ಗಿರವಿ ಇಟ್ಟು ಬಂದ ಹಣದಲ್ಲಿ ಜಾನ್ ದೇವಸ್ಥಾನಕ್ಕೆ ಹೋಗಿದ್ದಾನೆ. ಮಾಜಿ ಮಾಲೀಕನ ಮನೆಯಿಂದ ಕಳ್ಳತನ ಮಾಡಿದ್ದಕ್ಕಾಗಿ ದೇವರಲ್ಲಿ ಕ್ಷಮೆಯಾಚಿಸಿ, ಆಭರಣಗಳ ಮಾರಾಟದಿಂದ ಬಂದ ಹಣವನ್ನು ದೇವಾಲಯದ ಹುಂಡಿಗೆ ಹಾಕಿದ್ದಾನೆ.
ಅಷ್ಟೇ ಅಲ್ಲದೆ ದೇವಸ್ಥಾನ, ಕ್ರಿಶ್ಚಿಯನ್ ಚರ್ಚ್ ಮುಂದೆ ಕುಳಿತ ಭಿಕ್ಷುಕರಿಗೆ ಜಾನ್ ಹಣ ನೀಡಿ ಸಹಾಯ ಮಾಡಿರುವುದು ಕೂಡ ಬಯಲಾಗಿದೆ. ಬಂಧಿತ ಜಾನ್ ನೀಡಿದ ಮಾಹಿತಿ ಮೇರೆಗೆ ಮಾಜಿ ಮಾಲೀಕನ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಈತನ ವಿರುದ್ಧ ಬೆಂಗಳೂರು ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
youth offered the stolen items to the temple in Bengaluru Ashok Nagar
Follow us On
Google News |
Advertisement