ಕಣ್ಣಿಗೆ ಸುಣ್ಣ ಬಿದ್ದರೆ ಏನ್ ಮಾಡಬೇಕು ಗೊತ್ತಾ ?

NEUTRAL Treatment for Lime, chemical in the Eye

ಕಣ್ಣಿಗೆ ಸುಣ್ಣ ಬಿದ್ದರೆ ಏನ್ ಮಾಡಬೇಕು ಗೊತ್ತಾ ?

ಕಣ್ಣಿನ ಅಥವಾ ಕಣ್ಣುರೆಪ್ಪೆಯ ಯಾವುದೇ ಭಾಗಕ್ಕೆ ರಾಸಾಯನಿಕ ಉಪಯೋಗ ಶಾಶ್ವತವಾದ ಹಾನಿಗೆ ಸಾಧ್ಯವಿದೆ ಮತ್ತು ಅಷ್ಟೇ ಅಲ್ಲದೆ ನಮ್ಮನ್ನು ಶಾಶ್ವತ ಕುರುಡು ಮಾಡುವುದು, ನಮ್ಮ ಜೀವನವೇ ಬದಲಾಗುವ ಸಾಧ್ಯತೆಯಿದೆ. ಯಾವುದೇ ಕಣ್ಣಿನ ಸಮಸ್ಯೆ ಅಪಾಯಕಾರಿ ಮತ್ತು ಗಂಭೀರವಾಗಿ ಮತ್ತು ತಕ್ಷಣ ಅವುಗಳಿಗೆ ಚಿಕಿತ್ಸೆ ಮಾಡಬೇಕು.

ಸುಣ್ಣದ ದ್ರವ ಅಥವಾ ಪುಡಿ ರಾಸಾಯನಿಕವು ಕಣ್ಣನ್ನು ತಲುಪಿದಾಗ ತಡೆಯಲಾಗದ ಉರಿ ಸಂಭವಿಸುತ್ತದೆ. ನಿಮ್ಮ ಕಣ್ಣುಗಳನ್ನು ಉಜ್ಜುವ ಮೂಲಕ ಇನ್ನಷ್ಟು ಸುಡುವಿಕೆ ಉಂಟಾಗುತ್ತದೆ. ಕಣ್ಣು ಕೆಂಪು ಮತ್ತು ಕಿರಿಕಿರಿಯಿಂದ ಕುರುಡುತನದವರೆಗೆ ಇದು ಪರಿಣಾಮ ಬೀರುತ್ತದೆ.

ನಮಗೆ ಕಣ್ಣುಗಳು ಎಷ್ಟು ಮುಖ್ಯ ಎಂಬುದು, ಒಂದೆರಡು ನಿಮಿಷ ಕಣ್ಣುಗಳನ್ನು ಮುಚ್ಚಿ ಗಮನಿಸಿದಾಗ ತಿಳಿಯುತ್ತದೆ. ಇಂತಹ ಕಣ್ಣುಗಳಿಗೆ ನಾವು ಸಾಧ್ಯವಾದಷ್ಟು ಕಾಳಜಿವಹಿಸಬೇಕು.  ನಡುವೆಯೂ ಅಕಸ್ಮಾತಾಗಿ ಕಣ್ಣಿಗೆ ಸುಣ್ಣ ಬಿದ್ದರೆ ಏನ್ ಮಾಡಬೇಕು ?ಕಣ್ಣಿಗೆ ಸುಣ್ಣ ಬಿದ್ದರೆ ಏನ್ ಮಾಡಬೇಕು ಗೊತ್ತಾ ? - Kannada News

ಕಣ್ಣಿಗೆ ಸುಣ್ಣ ಬಿದ್ದರೆ ಏನ್ ಮಾಡಬೇಕು ಗೊತ್ತಾ ? - Kannada News

ಕಣ್ಣಿಗೆ ಸುಣ್ಣ ಬಿದ್ದರೆ ಈ ರೀತಿ ಮಾಡಿ.

ಹೌದು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಸುಣ್ಣವನ್ನು ಹೊರ ತೆಗೆಯಲು ಸುಲಭ ಮನೆಮದ್ದು ನಿಮಗೆ ನೆರವಾಗುತ್ತದೆ. ಸುಲಭವಾಗಿ ಸಿಗುವ ತೊಡೆಕಾಯಿ ಎಲೆಯು ಈ ಸಮಸ್ಯೆಗೆ ಪ್ರಮುಖ ಪರಿಹಾರ..

ಸುಣ್ಣ ಬಿದ್ದಾಗ ಸ್ವ-ಆರೈಕೆ ಅಥವಾ ಕಣ್ಣಿನ ರಕ್ಷಣೆ

ಒಂದೆರಡು ತೊಂಡೆಕಾಯಿ ಎಲೆಯನ್ನು ತೆಗೆದುಕೊಳ್ಳಿ, ಎಲೆಗಳನ್ನು ಶುಭ್ರಗೊಳಿಸಿ, ಮಿಕ್ಸಿ ಮಾಡಿಕೊಂಡು ಎಲೆಯ ರಸವನ್ನು ತೆಗೆದು ಕೊಳ್ಳಿ, ಸಿದ್ದ ಪಡಿಸಿಕೊಂಡ ತೊಂಡೆಕಾಯಿ ಎಲೆಯ ರಸಕ್ಕೆ ಎದೆಹಾಲನ್ನು ಬೆರಸಿ ದಿನಕ್ಕೆ ಮೂರುಬಾರಿ ಒಂದೆರಡು ದಿನ ಹಾಕುತ್ತಾ ಬಂದರೆ, ಕಣ್ಣಿಗೆ ಸುಣ್ಣ ಬಿದ್ದ ಸಮಸ್ಯೆ ಹಾಗೂ ಕಣ್ಣುನೋವು ಮಾಯವಾಗುತ್ತದೆ..

ಸೂಚನೆ : ಕಣ್ಣಿಗೆ ಸುಣ್ಣ ಬಿದ್ದಾಗ, ಕಣ್ಣುಗಳನ್ನು ಹುಜ್ಜಬೇಡಿ, ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಘಾಸಿಗೊಳಿಸಬೇಡಿ. 15 ರಿಂದ 20 ನಿಮಿಷಗಳ ಕಾಲ ನಿಮ್ಮ ಮುಖವನ್ನು ನೀರಿನಲ್ಲಿ ಇರಿಸಿ, ಕಣ್ಣುಗಳನ್ನು ನೀರಿನಲ್ಲಿ ತೆರೆಯಿರಿ. ನೀವು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸಿದ್ದರೆ, ಸಾಧ್ಯವಾದಷ್ಟು ಬೇಗ ಅವುಗಳನ್ನು ತೆಗೆದುಹಾಕಿ.

ನೋವಿನ ಮಟ್ಟ ಮತ್ತು ನಿಮ್ಮ ಕಣ್ಣಿನ ಸಮಸ್ಯೆ ಗಂಭೀರತೆಯಿಂದಿದ್ದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ. ////

Web Title : NEUTRAL Treatment for Lime, chemical in the Eye – Kannada News

Follow us On

FaceBook Google News

Read More News Today