Sonu Sood: ಧ್ವನಿವರ್ಧಕ, ಚಾಲೀಸಾ ವಿವಾದದ ಬಗ್ಗೆ ಸೋನು ಸೂದ್ ಪ್ರತಿಕ್ರಿಯೆ
Sonu Sood : ಭವ್ಯ ಭಾರತವನ್ನು ನಿರ್ಮಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೋನು ಸೂದ್ ರಾಜಕೀಯ ನಾಯಕರನ್ನು ಒತ್ತಾಯಿಸಿದರು.
Actor Sonu Sood React On Loud Speaker Row : ಮಹಾರಾಷ್ಟ್ರ ನವ ನಿರ್ಮಾಣ ಸೇನಾ ರಾಜ್ ಠಾಕ್ರೆ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೇ ವಿಚಾರವಾಗಿ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳ ನಡುವೆ ತೀವ್ರ ವಾಕ್ ಸಮರವೂ ನಡೆಯುತ್ತಿದೆ. ಈ ಬಗ್ಗೆ ಬಾಲಿವುಡ್ ನ ಪ್ರಮುಖ ನಟ ಸೋನು ಸೂದ್ ಕೂಡ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಎಲ್ಲರೂ ಒಂದಾಗೋಣ. ಹನುಮಾನ್ ಚಾಲೀಸಾ, ಧ್ವನಿವರ್ಧಕಗಳ ಕುರಿತು ನಡೆಯುತ್ತಿರುವ ವಿವಾದ ನನಗೆ ಬಹಳಷ್ಟು ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ಕೊರೊನಾ ಅವಧಿಯ ನೆನಪಾಯಿತು. ಜನರು ಎರಡು ಗುಂಪುಗಳಾಗಿ ಹೊಡೆದಾಡುವುದನ್ನು ನೋಡಿದರೆ ಬೇಸರವಾಗುತ್ತದೆ. ಕಳೆದ ವರ್ಷ ನಾವೆಲ್ಲರೂ ಸೇರಿ ಕೊರೊನಾ ವೈರಸ್ ವಿರುದ್ಧ ಹೋರಾಡಿದೆವು. ರಾಜಕೀಯ ಪಕ್ಷಗಳು ಕೂಡ ಕೊರೊನಾ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದವು.
ಆಮ್ಲಜನಕದ ಕೊರತೆ ಇತ್ತು. ಜನರಿಗೆ ತೊಂದರೆಯಾಗುತ್ತಿತ್ತು. ಈ ವೇಳೆ ಯಾರೂ ಧರ್ಮ, ಜಾತಿಯ ಬಗ್ಗೆ ಮಾತನಾಡಲಿಲ್ಲ. ಕೊರೊನಾ ಇಡೀ ದೇಶವನ್ನು ಒಗ್ಗಟ್ಟಿನಿಂದ ನೋಡಿತ್ತು. ನಮ್ಮ ಸಂಬಂಧಗಳು ನನ್ನ ಮತಕ್ಕೆ ಮೀರಿದ್ದು ಎಂದು ಸೋನು ಸೂದ್ ಹೇಳಿದ್ದಾರೆ.
ಭವ್ಯ ಭಾರತವನ್ನು ನಿರ್ಮಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೋನು ಸೂದ್ ರಾಜಕೀಯ ನಾಯಕರನ್ನು ಒತ್ತಾಯಿಸಿದರು. ಧರ್ಮದ ಗೋಡೆಯನ್ನು ಒಡೆದು ಮಾನವೀಯತೆಯ ನೆಲೆಯಲ್ಲಿ ಪರಸ್ಪರ ಸಹಾಯ ಮಾಡಬೇಕೆಂದು ಸೋನು ಸೂದ್ ರಾಜಕೀಯ ನಾಯಕರಿಗೆ ಮನವಿ ಮಾಡಿದರು.
Follow Us on : Google News | Facebook | Twitter | YouTube