ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ, ಯೋಧ ಸಾವು
ಛತ್ತೀಸ್ಗಢದ ನಾರಾಯಣಪುರ್ ನಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಯಲ್ಲಿ ಡಿಆರ್ಜಿ ಯೋಧ ಸಾವನ್ನಪ್ಪಿದ್ದಾರೆ.
ರಾಯ್ಪುರ: ಛತ್ತೀಸ್ಗಢದ ನಾರಾಯಣಪುರ್ ನಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಯಲ್ಲಿ ಡಿಆರ್ಜಿ ಯೋಧ ಸಾವನ್ನಪ್ಪಿದ್ದಾರೆ. ಇರ್ಪನಾರ್ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯನ್ನು ಬಸ್ತಾರ್ ಐಜಿಪಿ ಸುಂದರರಾಜ್ ಖಚಿತಪಡಿಸಿದ್ದಾರೆ. ನಾರಾಯಣಪುರ್ ಜಿಲ್ಲಾಸ್ಪತ್ರೆಯಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಬರ್ಪುರ್ ರಸ್ತೆಯಲ್ಲಿ ಕಡಮೆಟ-ಕಡೇನಾರ್ ನಡುವೆ ಮಾವೋವಾದಿಗಳು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಡಿಆರ್ಜಿ ಮತ್ತು ಐಟಿಬಿಪಿ ಸಿಬ್ಬಂದಿ ಕೂಂಬಿಂಗ್ ಕೈಗೊಂಡಿದ್ದಾರೆ.
ಕಾರ್ಯಾಚರಣೆ ವೇಳೆ ಮಾವೋವಾದಿಗಳು ಇರ್ಪನಾರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹೊಂಚು ಹಾಕಿದ್ದರು. ತಕ್ಷಣ ಭದ್ರತಾ ಪಡೆಗಳು ಕೂಡ ದಿಟ್ಟ ಉತ್ತರ ನೀಡಿದರು. ಮಾವೋವಾದಿಗಳ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡಿಆರ್ಜಿ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಾನುಪ್ರತಾಪುರ್ ನಿವಾಸಿ ಯೋಧ ಸಾಲಿಖ್ರಾಮ್ ಡಿಆರ್ಜಿಯಲ್ಲಿ ಎಎಸ್ಐ ಆಗಿ ನೇಮಕಗೊಂಡಿದ್ದರು. ಅವರ ಪಾರ್ಥಿವ ಶರೀರವನ್ನು ದಂತೇವಾಡ ಅರಣ್ಯ ಮಾರ್ಗವಾಗಿ ನಾರಾಯಣಪುರಕ್ಕೆ ಸ್ಥಳಾಂತರಿಸಲಾಗುವುದು.
News Today : Sacrifice Of A Jawan In An Encounter With Naxalites In Irpanar Forest Of Narayanpur
Follow Us on : Google News | Facebook | Twitter | YouTube