ಕಾಶ್ಮೀರಿ ಪಂಡಿತರನ್ನು ಕೊಂದ ಉಗ್ರರನ್ನು ಸೇನೆ 24 ಗಂಟೆಗಳಲ್ಲಿ ಹೊಡೆದುರುಳಿಸಿದೆ
ಕೇವಲ 24 ಗಂಟೆಗಳಲ್ಲಿ ಭಾರತೀಯ ಸೇನೆ ತನ್ನ ಕೈಚಳಕ ತೋರಿದೆ. ಕಾಶ್ಮೀರ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಕೊಂದ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಎನ್ ಕೌಂಟರ್ ಮಾಡಿದೆ.
India News : ಕೇವಲ 24 ಗಂಟೆಗಳಲ್ಲಿ ಭಾರತೀಯ ಸೇನೆ ತನ್ನ ಕೈಚಳಕ ತೋರಿದೆ. ಕಾಶ್ಮೀರ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಕೊಂದ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಎನ್ ಕೌಂಟರ್ ಮಾಡಿದೆ. ಎರಡು ದಿನಗಳಲ್ಲಿ ರಾಹುಲ್ ಭಟ್ ಹತ್ಯೆ ಮಾಡಿದ ಉಗ್ರರನ್ನು ಗುರುತಿಸಿ ಎನ್ ಕೌಂಟರ್ ಮಾಡುವುದಾಗಿ ಸೇನೆ ಆತನ ಪತ್ನಿಗೆ ಭರವಸೆ ನೀಡಿತ್ತು.
ಭರವಸೆ ನೀಡಿದ ಒಂದೇ ದಿನದಲ್ಲಿ ರಾಹುಲ್ ಭಟ್ ರನ್ನು ಕೊಂದ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಂಡಿಪೋರಾದಲ್ಲಿ ಮೂವರು ಉಗ್ರರನ್ನು ಸೇನೆ ವಶಪಡಿಸಿಕೊಂಡಿದೆ ಈ ಮೂವರಲ್ಲಿ ಇಬ್ಬರು ರಾಹುಲ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ತಹಸೀಲ್ದಾರ್ ಕಚೇರಿಗೆ ನುಗ್ಗಿದ ಉಗ್ರರು ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಕಚೇರಿಯಲ್ಲಿ ಗುಂಡಿನ ಚಕಮಕಿ ನಡೆದ ನಂತರ ಉದ್ಯೋಗಿಗಳು ರಾಹುಲ್ ಭಟ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ರಾಹುಲ್ ಭಟ್ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಶ್ರೀನಗರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ.
Within 24 Hours The Army Took Revenge The Terrorists Killed Rahul Bhatt Were Brought To The End
Follow Us on : Google News | Facebook | Twitter | YouTube