ಖೇತಿ ಬಚಾವೊ ಯಾತ್ರೆ – ರೈತರನ್ನು ಕಾರ್ಪೊರೇಟ್ಗಳ ಗುಲಾಮರನ್ನಾಗಿ ಮಾಡುವ ಹೊಸ ಕಾನೂನುಗಳು : ರಾಹುಲ್ ಗಾಂಧಿ
( Kannada News ) ನವದೆಹಲಿ : ಈ ಹೊಸ ರೈತ ಮಸೂದೆಗಳನ್ನು ಜಾರಿಗೊಳಿಸಿದರೆ, ರೈತರು ಮತ್ತು ಕಾರ್ಮಿಕರು ಕೆಲವು ಕಾರ್ಪೊರೇಟ್ಗಳ ಗುಲಾಮರಾಗುತ್ತಾರೆ ಎಂದು ಅವರು ತಮ್ಮ ‘ಖೇತಿ ಬಚಾವೊ ಯಾತ್ರೆ’ಯ ಮುಕ್ತಾಯದ ದಿನದಂದು ಪಂಜಾಬ್ನ ಪಟಿಯಾಲ ಜಿಲ್ಲೆಯ ಸನೌರ್ ಬಳಿಯ ಫ್ರಾನ್ಸ್ವಾಲಾ ಗ್ರಾಮದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೊಸ ಕೃಷಿ ಕಾನೂನುಗಳ ಬಗ್ಗೆ ಕೇಂದ್ರದ ಮೇಲೆ ಮಾತಿನ ದಾಳಿ ನಡೆಸುತ್ತಲೇ ಇದ್ದು, ಈ ಶಾಸನಗಳ ವಿರುದ್ಧದ ಹೋರಾಟವು “ಭಾರತದ ಹೋರಾಟ” ಎಂದು ಹೇಳಿದ್ದಾರೆ.
ಇದು ಕ್ರಮ ತೆಗೆದುಕೊಳ್ಳುವ ಸಮಯ. ನೀವು ಆರು ತಿಂಗಳು ಅಥವಾ ಒಂದು ವರ್ಷ ಕಾಯುತ್ತಿದ್ದರೆ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಗಾಂಧಿ ತಿಳಿಸಿದರು.
Punjab: Congress leader Rahul Gandhi's tractor rally, as part of party's 'Kheti Bachao Yatra', from Nurpur in Patiala stopped at Haryana border.
"I am not moving and am happy to wait here. 1 hour, 5 hours, 24 hours, 100 hours, 1000 hours or 5000 hours," he tweets. https://t.co/TPhoBWy5Ie pic.twitter.com/JdVDUcfSyd
— ANI (@ANI) October 6, 2020
ನಷ್ಟವು ಕೇವಲ ರೈತರು, ಕೃಷಿ ಕಾರ್ಮಿಕರು ಅಥವಾ ಸಣ್ಣ ವ್ಯಾಪಾರಿಗಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಮೂರು ದಿನಗಳ ಪಂಜಾಬ್ ‘ಖೇತಿ ಬಚಾವೊ ಯಾತ್ರೆ’ ಮಂಗಳವಾರ ಹರಿಯಾಣದ ಗಡಿಯಲ್ಲಿ ಮುಕ್ತಾಯಗೊಂಡಿದೆ.
The process for procuring these aircraft began around a decade ago under UPA Govt. Modi Govt has simply brought this process to a logical conclusion. These aircraft are not PM’s aircraft but will be used for other VVIPs too. These belong to IAF and not the Prime Minister: Sources https://t.co/2LbjsZhaCC
— ANI (@ANI) October 6, 2020
ಏತನ್ಮಧ್ಯೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿ, “ನಮ್ಮ ಆರ್ಥಿಕ ವ್ಯವಸ್ಥೆಯು ಸದೃಡವಾಗಬೇಕೆಂದು ರಾಹುಲ್ ಗಾಂಧಿ ಎಂದಿಗೂ ಬಯಸುವುದಿಲ್ಲ. ಅವರು ಸುಧಾರಣೆಗಳಿಗೆ ವಿರುದ್ಧವಾಗಿರುವುದು ಇದೇ ಮೊದಲಲ್ಲ, ”ಎಂದು ಹೇಳಿದ್ದಾರೆ.