ರಾಜ್ಯಸಭೆಯಲ್ಲಿ ಆ 12 ಸಂಸದರ ಅಮಾನತು ಸಂವಿಧಾನ ಬಾಹಿರ : ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭಾ ಸದಸ್ಯರ ಮೇಲಿನ ಅಮಾನತು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಸದರ ಮೇಲಿನ ಅಮಾನತು ಹಿಂಪಡೆದು ಸದನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಖರ್ಗೆ ಸೂಚಿಸಿದರು.
ನವದೆಹಲಿ: ರಾಜ್ಯಸಭೆಯಲ್ಲಿ 12 ಸಂಸದರ ಅಮಾನತು ಕ್ರಮವನ್ನು ಕಾಂಗ್ರೆಸ್ ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಟೀಕಿಸಿದ್ದಾರೆ. ಅಮಾನತುಗೊಳಿಸಿರುವುದನ್ನು ವಿರೋಧಿಸಿ 12 ವಿಪಕ್ಷ ಸಂಸದರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಸಭಾ ಅಧ್ಯಕ್ಷರ ನಿರ್ಧಾರಕ್ಕೆ ತಾವು ವಿರುದ್ಧವಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ಸದನದ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರೆಂದು ಸದನದ ಸದಸ್ಯರನ್ನು ಅಮಾನತುಗೊಳಿಸುವುದು ಸದನದ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 12 ಸಂಸದರ ಅಮಾನತು ಅಸಂವಿಧಾನಿಕ. ರಾಜ್ಯಸಭಾ ಸದಸ್ಯರ ಮೇಲಿನ ಅಮಾನತು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಸದರ ಮೇಲಿನ ಅಮಾನತು ಹಿಂಪಡೆದು ಸದನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಖರ್ಗೆ ಸೂಚಿಸಿದರು.
Follow Us on : Google News | Facebook | Twitter | YouTube