ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ ದುಷ್ಕರ್ಮಿಗಳು

Cable-cut in Mandya

ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ ದುಷ್ಕರ್ಮಿಗಳು

ಮಂಡ್ಯ ಭಾಗದಲ್ಲಿ ರಾತ್ರೋ ರಾತ್ರಿಯೇ ದುಷ್ಕರ್ಮಿಗಳು ಕೇಬಲ್ ಕಟ್ ಮಾಡಿದ್ದಾರೆ, ಆದರೆ ಯಾವ ಕಾರಣಕ್ಕೆ ಮತ್ತು ಯಾರು ಕತ್ತರಿಸಿದ್ದಾರೆಂದು ತಿಳಿದು ಬಂದಿಲ್ಲ. ಸಧ್ಯ ಕೇಬಲ್ ವಯರ್ ಗಳನ್ನು ಮರು ಜೋಡಣೆ ಮಾಡುತ್ತಿರುವ ಕೇಬಲ್ ಸಿಬ್ಬಂದಿಗಳು, ಕತ್ತರಿಸಿರುವ ವಯರ್ ಗಳನ್ನೂ ಹುಡುಕಲು ಹರಸಾಹಸ ಪಡುತ್ತಿದ್ದಾರೆ.

ಈ ಹಿಂದೆಯೂ ಸಹ ಸುಮಲತಾ ಪ್ರಚಾರದ ವೇಳೆ ರ್ಯಾಲಿ ವೇಳೆ ಇದೆ ರೀತಿ ಕೇಬಲ್ ಕಟ್ ಮಾಡಿದ್ದೂ ಅಲ್ಲದೆ ಪವರ್ ಸಹ ಕಟ್ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.

ಸಧ್ಯ ಆರಂಭಿಕ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದ ಸುಮಲತಾ, ಇದೀಗ ಮುನ್ನಡೆಗೆ ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ಪುಟ್ಟರಾಜುರವರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮುನ್ನಡೆ ಸಿಕ್ಕಿದೆ. ಇನ್ನೂ ಸುಮಲತಾ ಮತ್ತು ನಿಖಿಲ್ ವಿರುದ್ಧ ಬಾರಿ ಹಣಾಹಣಿ ನಡೆಯುತ್ತಿದ್ದು ಅಂತಿಮ ಫಲಿತಾಂಶಕ್ಕಾಗಿ ಜನರು ಕಾದು ಕುಳಿತಿದ್ದಾರೆ..////

ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ ದುಷ್ಕರ್ಮಿಗಳು - Kannada News

 

Follow us On

FaceBook Google News

Read More News Today