ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ NTR
Puneet Rajkumar : ಪುನೀತ್ ಸಾವಿನ ಸುದ್ದಿ ಕೇಳಿದ ಎನ್ಟಿಆರ್ಗೆ ನಂಬಲಾಗುತ್ತಿಲ್ಲ. ಇದು ತುಂಬಾ ದುಃಖ ತಂದಿದೆ' ಎಂದು ಎನ್ಟಿಆರ್ ಟ್ವೀಟ್ ಮಾಡಿದ್ದಾರೆ. ಇದೀಗ ಜೂನಿಯರ್ ಎನ್ ಟಿ ಆರ್ (NTR) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ.
Puneet Rajkumar : ಪುನೀತ್ ರಾಜ್ಕುಮಾರ್ ಅವರ ಹೆಸರು ಸ್ಯಾಂಡಲ್ವುಡ್ ಸ್ಟಾರ್ಗಳಲ್ಲದೆ ಎಲ್ಲಾ ಇಂಡಸ್ಟ್ರಿಗಳ ಸ್ಟಾರ್ಗಳೊಂದಿಗೆ ತಳುಕು ಹಾಕಿಕೊಂಡಿದೆ. ಅದರಲ್ಲೂ ಅಪ್ಪು ತೆಲುಗಿನಲ್ಲಿ ಹಲವು ತಾರೆಯರ ಜೊತೆ ತುಂಬಾ ಆತ್ಮೀಯರು. ಅದರಲ್ಲೂ ಪುನೀತ್ ರಾಜ್ ಕುಮಾರ್ ಮತ್ತು ಎನ್ ಟಿಆರ್ ನಡುವಿನ ಗೆಳೆತನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಎನ್ಟಿಆರ್ (NTR) ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ಬಂದ ಆಂದ್ರಾವಾಲ ಭಾರೀ ಕ್ರೇಜ್ನ ನಡುವೆ ಬಿಡುಗಡೆಯಾಗಿತ್ತು. ಆದರೆ ಅದು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇದನ್ನು ಪುನೀತ್ ರಾಜ್ಕುಮಾರ್ ಅವರು ‘ವೀರ ಕನ್ನಡಿಗ’ ಶೀರ್ಷಿಕೆಯೊಂದಿಗೆ ಕನ್ನಡಕ್ಕೆ ರೀಮೇಕ್ ಮಾಡಿದ್ದಾರೆ. ಇದು ಪುನೀತ್ ಮತ್ತು ಎನ್ ಟಿಆರ್ ನಡುವಿನ ಸ್ನೇಹವನ್ನು ಗಟ್ಟಿಗೊಳಿಸಿದೆ.
ಚಕ್ರವ್ಯೂಹ ಎಂ ಸರವಣನ್ ನಿರ್ದೇಶನದ ಮತ್ತು ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರ. ಪುನೀತ್ ಖುದ್ದಾಗಿ ಎನ್ ಟಿಆರ್ ಗೆ ಒಂದು ಹಾಡನ್ನು ಹಾಡಲು ಆಫರ್ ಕೊಟ್ಟಿದ್ದರು. ‘ಗೆಳೆಯ ಗೆಳೆಯ’ ಹಾಡು ಆ ವೇಳೆ ವೈರಲ್ ಆಗಿತ್ತು.
ಪುನೀತ್ ಸಾವಿನ ಸುದ್ದಿ ಕೇಳಿದ ಎನ್ಟಿಆರ್ಗೆ ನಂಬಲಾಗುತ್ತಿಲ್ಲ. ಇದು ತುಂಬಾ ದುಃಖ ತಂದಿದೆ’ ಎಂದು ಎನ್ಟಿಆರ್ ಟ್ವೀಟ್ ಮಾಡಿದ್ದಾರೆ. ಇದೀಗ ಜೂನಿಯರ್ ಎನ್ ಟಿ ಆರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ.
Follow us On
Google News |