ಕೆಲ ಹೊತ್ತಿನಲ್ಲೇ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ
Puneet Rajkumar : ಇನ್ನು ಕೆಲವೇ ಹೊತ್ತಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಟ ಪುನೀತ್ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ನಡೆಯಲಿದೆ, ಕುಶಾಲು ತೋಪು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು
Puneet Rajkumar : ಇನ್ನು ಕೆಲವೇ ಹೊತ್ತಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಟ ಪುನೀತ್ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ನಡೆಯಲಿದೆ, ಕುಶಾಲು ತೋಪು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು, ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಗೌರವ ಸಲ್ಲಿಸಲಾಯಿತು.
ಈ ನಡುವೆ ಅಭಿಮಾನಿಗಳ ಆಗಮನ ಇನ್ನೂ ನಿಲ್ಲುತ್ತಿಲ್ಲ, ತಮ್ಮ ಅಭಿಮಾನ ನಟನನ್ನು ನೋಡಲು ಸಾಗರದಂತೆ ಜನರು ಇನ್ನೂ ಆಗಮಿಸುತ್ತಲೇ ಇದ್ದಾರೆ. ಈ ನಡುವೆ ನಟ ಪುನೀತ್ ರಾಜ್ ಕುಮಾರ್ ನಿಧಾನಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೇರಳ ಮುಖ್ಯಮತ್ರಿ ಪಿಣರಾಯಿ ವಿಜಯನ್ ಸಹ ಸಂತಾಪ ಸೂಚಿಸಿದ್ದಾರೆ.
ನಗರದ ವಿವಿದೆಡೆ ಸ್ವಯಂ ಅಂಗಡಿಗಳನ್ನು ಮುಚ್ಚಿ ನಟನಿಗೆ ಸಂತಾಪ ಸೂಚಿಸಿದ್ದಾರೆ. ವಿವಿದೆಡೆ ಮೇಣದ ಬತ್ತಿ ಹಚ್ಚುವ ಮೂಲಕ, ಪೂಜೆಗಳನ್ನು ಮಾಡುವ ಮೂಲಕ ಮತ್ತೆ ಹುಟ್ಟಿ ಬಾ ಅಪ್ಪು ಎಂದು ಘೋಷಣೆ ಕೂಗಲಾಗುತ್ತಿದೆ.
ಕಂಠೀರವ ಸ್ಟುಡಿಯೋದಲ್ಲಿ ಮೂರು ಸುತ್ತು ಕುಶಾಲು ತೋಪು ಹಾರಿಸಿ ರಾಷ್ಟ್ರಗೀತೆಯೊಂದಿಗೆ ನಟನಿಗೆ ಗೌರವ ಸೂಚಿಸಲಾಯಿತು, ನಂತರ ಮೌನ ಸೂಚಿಸಲಾಯಿತು..
ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪುನೀತ್ ಕುಟುಂಬದವರಿಗೆ ರಾಷ್ಟ್ರದ್ವಜವನ್ನು ನೀಡಲಾಯಿತು, ಪುನೀತ್ ಮೇಲೆ ಹೊದಿಸಲಾಗಿದ್ದ ರಾಷ್ಟ್ರದ್ವಜ..
Follow us On
Google News |