ಹಾಸನಾಂಬೆ ದರ್ಶನ ಪಡೆದ ಡಿಕೆ ಶಿವಕುಮಾರ್! ರಾಜ್ಯದ ಜನರಿಗಾಗಿ ಪ್ರಾರ್ಥನೆ
ಬೆಂಗಳೂರು (Bengaluru): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM D.K. Shivakumar) ಶುಕ್ರವಾರ ಕುಟುಂಬದೊಂದಿಗೆ ಹಾಸನಾಂಬೆ ದೇವಿಯ (Hassanambe) ದರ್ಶನ ಪಡೆದಿದ್ದಾರೆ ಮತ್ತು ಈ ಸಂದರ್ಭದಲ್ಲಿ ವಿಶೇಷ ಪೂಜೆ (special pooja) ಸಲ್ಲಿಸಿದರು.
ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದು ತಾಯಿ ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದಿದ್ದೇನೆ. ಈ ವರ್ಷ ತಾಯಿ ಕೃಪೆಯಿಂದ ಮಳೆ-ಬೆಳೆ (rain-crop) ಉತ್ತಮವಾಗಿದೆ. ರಾಜ್ಯದ ಜನರಿಗೆ ನೆಮ್ಮದಿಯನ್ನ ತಾಯಿ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ಉತ್ತಮ ಆರೋಗ್ಯ (good health) ಮತ್ತು ಐಶ್ವರ್ಯ (prosperity) ನೀಡಲೆಂದು ಪ್ರಾರ್ಥನೆ ಮಾಡಿದ್ದೇನೆ.” ಎಂದು ತಿಳಿಸಿದರು.
ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ BBMP ಸೂಚನೆ
ಈ ವೇಳೆ, ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು ಮತ್ತು “3 ಕ್ಷೇತ್ರಗಳ ಉಪಚುನಾವಣೆ (by-elections) ಬಗ್ಗೆ ಈಗ ಮಾತನಾಡಲ್ಲ” ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತ (district administration) ಹಾಸನಾಂಬೆ ದರ್ಶನ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ ಮಾಡಿರುವ ವ್ಯವಸ್ಥೆಗೆ ಡಿಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
DK Shivakumar darshan of Hassanambe
Our Whatsapp Channel is Live Now 👇