ಎಲ್ಲಾ ಗ್ಯಾರಂಟಿ ಯೋಜನೆಗೆ ಪೈಪೋಟಿ ನೀಡಲು ಬಂದಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಶುರು!
ಕಾರ್ಮಿಕ ವರ್ಗದವರು ಮುಂದುವರೆದು ಉತ್ತಮ ಸ್ಥಾನಕ್ಕೆ ತಲುಪಬೇಕು ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ನಮ್ಮ ಭಾರತ ದೇಶ ಮುಂದುವರೆಯುತ್ತಿರುವ ದೇಶವಾಗಿದೆ, ನಮ್ಮಲ್ಲಿ ಬಹಳಷ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಬಡವರ್ಗದ ಜನರು, ರೈತರು, ಕಾರ್ಮಿಕ ವರ್ಗದವರು ಇವರೆಲ್ಲರಿಗೂ ಸಹ ಆರ್ಥಿಕವಾಗಿ ಸಹಾಯ ಆಗಲಿ ಎಂದು, ಇವರೆಲ್ಲರು ಆರ್ಥಿಕವಾಗಿ ಸಬಲರಾಗಿರಬೇಕು, ತೊಂದರೆ ಅನುಭವಿಸಬಾರದು ಎಂದು ಭಾರತದ ಕೇಂದ್ರ ಸರ್ಕಾರವು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ದೇಶ ಬೆಳವಣಿಗೆ ಆಗಬೇಕು ಎಂದರೆ, ಈ ವರ್ಗದ ಜನರು ಮುಂದುವರೆದು ಉತ್ತಮ ಸ್ಥಾನಕ್ಕೆ ತಲುಪುವುದು ಬಹಳ ಮುಖ್ಯವಾಗುತ್ತದೆ.. ಹಾಗಾಗಿ ಕೇಂದ್ರ ಸರ್ಕಾರ ಇವರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂಥ ಯೋಜನೆಗಳಲ್ಲಿ ಒಂದು ಲೇಬರ್ ಕಾರ್ಡ್ ಪೋರ್ಟಲ್ (Labor Card Portal) ಸಹ ಆಗಿದೆ. ಕಾರ್ಮಿಕ ವರ್ಗದವರಿಗೆ ಈ ಯೋಜನೆಯ ಲಾಭ ಸಿಗುತ್ತದೆ.
ಕಾರ್ಮಿಕ ವರ್ಗದ ಜನರು ಲೇಬರ್ ಕಾರ್ಡ್ ಪೋರ್ಟಲ್ ನಲ್ಲಿ ಸಿಗುವ ಎಲ್ಲಾ ಲಾಭಗಳನ್ನು ಪಡೆಯಲು ಮೊದಲು ಇಶ್ರಮ್ ಪೋರ್ಟಲ್ (Eshram Portal) ಗೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಈ ಯೋಜನೆಯ ಅಡಿಯಲ್ಲಿ ಕಾರ್ಮಿಮ ವರ್ಗದ ಜನರಿಗೆ ಭಾರಿ ಅನುಕೂಲ ಸಿಗಲಿದ್ದು, ಉತ್ತರ ಪ್ರದೇಶದ (Uttar Pradesh) ರಾಜ್ಯ ಸರ್ಕಾರ ಇದರ ಬಗ್ಗೆ ದೊಡ್ಡ ಮಾಹಿತಿ ನೀಡಿದೆ.
ಈ ಯೋಜನೆಯ ಮೂಲಕ 3 ಕೋಟಿಗಿಂತ ಹೆಚ್ಚು ಕಾರ್ಮಿಕರ ಬ್ಯಾಂಕ್ ಖಾತೆಗೆ 500 ರೂಪಾಯಿ ವರ್ಗಾವಣೆ ಆಗಲಿದೆ.. ಉತ್ತರ ಪ್ರದೇಶ ರಾಜ್ಯದ ನಿವಾಸಿಗಳು ಇಲೇಬರ್ ಪೋರ್ಟಲ್ (Elabour Portal) ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಬಹುದು, ಆಯ್ಕೆಯಾಗುವ ಫಲಾನುಭವಿಗಳಿಗೆ ಈ ಯೋಜನೆಯ ಪೂರ್ತಿ ಸೌಲಭ್ಯ ಸಿಗುತ್ತದೆ.
ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಇಲ್ಲಿಯವರೆಗು 14ಕೋಟಿಗಿಂತ ಹೆಚ್ಚಿನ ಜನರು ಈ ಯೋಜನೆಗೆ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ..ಈ ಯೋಜನೆಯಲ್ಲಿ ಸಿಗುವ ಮತ್ತೊಂದು ಮಹತ್ವಡ್ಸ್ ಪ್ರಯೋಜನ ಏನು ಎಂದರೆ, ಇದರಲ್ಲಿ ಅಪಘಾತದ ವಿಮೆ (Accident Insurance) ಸೌಲಭ್ಯ ಸಹ ಇದ್ದು, ಹಾಗೇನಾದರೂ ದುರ್ಘಟನೆ ಎದುರಾದರೆ, 2 ಲಕ್ಷದ ವರೆಗು ವಿಮೆಯ ಹಣ ಪಡೆಯಬಹುದು..
ಒಂದು ವೇಳೆ ಉತ್ತರ ಪ್ರದೇಶದ ಜನರು ಈ ಯೋಜನೆಗೆ ರಿಜಿಸ್ಟರ್ ಮಾಡಿಸಿದ್ದರೆ, ಬಹಳ ಬೇಗ ಈ ಯೋಜನೆಯ ಲಾಭವನ್ನು ಪಡೆಯುತ್ತೀರಿ, ಏಕೆಂದರೆ ಎಲೆಕ್ಷನ್ ಗಿಂತ ಮೊದಲು ಯೋಜನೆಗೆ ಸೇರಿದ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ, ಹಾಗಾಗಿ ಎಲೆಕ್ಷನ್ ಗಿಂತ ಮೊದಲೇ ಫಲಾನುಭವಿಗಳ ಖಾತೆಗೆ ಹಣ ಬರಲಿದೆ.
Eshram card will be introduced by central government
Follow us On
Google News |