India News

ಉತ್ತರ ಪ್ರದೇಶ ಬಸ್ ಅಪಘಾತ, ಕಾಲುವೆಗೆ ಉರುಳಿದ ಬಸ್.. 3 ಸಾವು, 24 ಮಂದಿಗೆ ಗಾಯ

ಶುಕ್ರವಾರ ಸಂಜೆ ಇಲ್ಲಿ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸುತ್ತಿದ್ದ ಬಸ್ಸೊಂದು (Bus Accident) ಚರಂಡಿಗೆ ಬಿದ್ದ ಪರಿಣಾಮ ಮೂವರು ಮೃತಪಟ್ಟು 24 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

53 ಜನರಿದ್ದ ಬಸ್ ಬಲರಾಂಪುರದಿಂದ ಸಿದ್ಧಾರ್ಥನಗರಕ್ಕೆ (UP, Siddharthnagar) ತೆರಳುತ್ತಿತ್ತು. ಸಿದ್ಧಾರ್ಥನಗರ ಜಿಲ್ಲೆಯ ಧಬರುವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಪೊಲೀಸ್ ಅಧೀಕ್ಷಕ ಪ್ರಾಚಿ ಸಿಂಗ್ ಪ್ರಕಾರ, ಬೈಕ್ ಸವಾರನನ್ನು ಉಳಿಸಲು ಪ್ರಯತ್ನಿಸುವಾಗ ಚಾಲಕ ಬಸ್ ನಿಯಂತ್ರಣ ಕಳೆದುಕೊಂಡಿದ್ದಾನೆ.

ಉತ್ತರ ಪ್ರದೇಶ ಬಸ್ ಅಪಘಾತ, ಕಾಲುವೆಗೆ ಉರುಳಿದ ಬಸ್.. 3 ಸಾವು, 24 ಮಂದಿಗೆ ಗಾಯ

ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ, 6 ದಿನಗಳಲ್ಲಿ 20ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ

ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಬಲರಾಂಪುರದಿಂದ ಸಿದ್ಧಾರ್ಥನಗರಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಆ ವೇಳೆ ಬಸ್‌ನಲ್ಲಿ 53 ಮಂದಿ ಇದ್ದರು.

ಸೈಕಲ್ ಸವಾರನನ್ನು ಉಳಿಸಲು ಪ್ರಯತ್ನಿಸುವಾಗ, ಬಸ್ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದಿತು ಎಂದು ಎಸ್ಪಿ ಪ್ರಾಚಿ ಸಿಂಗ್ ಹೇಳಿದ್ದಾರೆ. ಇಬ್ಬರು ಪ್ರಯಾಣಿಕ ಜೊತೆಗೆ ಸೈಕಲ್ ಸವಾರ ಕೂಡ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ರಾತ್ರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸಂಜೆ 6 ಗಂಟೆ ಸುಮಾರಿಗೆ ಅಪಘಾತದ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳೀಯ ಪೊಲೀಸರು ಸ್ಥಳೀಯರ ನೆರವಿನಿಂದ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಬಾಘರಾಯ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ

3 Killed, 24 Injured in Road Accident in UP Siddharthnagar After Bus Fell into Drain

Our Whatsapp Channel is Live Now 👇

Whatsapp Channel

Related Stories