ಪಿಎಂ ಕಿಸಾನ್ 23ನೇ ಕಂತು: ಹಣ ಬರಲು ಮೊಬೈಲ್ ನಂಬರ್ ಅಪ್‌ಡೇಟ್ ಕಡ್ಡಾಯ!

ಪಿಎಂ ಕಿಸಾನ್ ಯೋಜನೆಯ 23ನೇ ಕಂತು ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರೈತರು ಹಣ ಪಡೆಯಲು ಮೊಬೈಲ್ ನಂಬರ್ ಅಪ್‌ಡೇಟ್ ಮಾಡಬೇಕು. ಇಲ್ಲದಿದ್ದರೆ ಕಂತಿನ ಹಣ ಖಾತೆಗೆ ಜಮೆಯಾಗದೇ ಇರುವ ಸಾಧ್ಯತೆ ಇದೆ.

ಪಿಎಂ ಕಿಸಾನ್ 23ನೇ ಕಂತಿಗಾಗಿ ರೈತರ ನಿರೀಕ್ಷೆ

ದೇಶದ ರೈತರಿಗೆ ಆರ್ಥಿಕ ನೆರವಾಗಲು ಕೇಂದ್ರ ಸರ್ಕಾರ ಆರಂಭಿಸಿದ ಪ್ರಮುಖ ಯೋಜನೆಗಳಲ್ಲಿ PM ಕಿಸಾನ್ (PM-Kisan) ಪ್ರಮುಖವಾಗಿದೆ. ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6,000 ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈಗಾಗಲೇ ಸರ್ಕಾರ 22 ಕಂತುಗಳನ್ನು ಬಿಡುಗಡೆ ಮಾಡಿದ್ದು, ಕೊನೆಯದಾಗಿ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಗೌಹಾತಿಯಲ್ಲಿ 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು.

ಇದೀಗ ದೇಶದಾದ್ಯಂತ ರೈತರು 23ನೇ ಕಂತಿಗಾಗಿ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಯೋಜನೆಯ ಹಣ ಬಿಡುಗಡೆಯಾಗುತ್ತದೆ. ಮಾರ್ಚ್‌ನಲ್ಲಿ 22ನೇ ಕಂತು ಬಿಡುಗಡೆಯಾದ ಹಿನ್ನೆಲೆ, ಮುಂದಿನ 23ನೇ ಕಂತು ಜುಲೈ ತಿಂಗಳಲ್ಲಿ ಬರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಹಣ ಪಡೆಯಲು ಮೊಬೈಲ್ ನಂಬರ್ ಅಪ್‌ಡೇಟ್ ಮುಖ್ಯ

ಈ ಬಾರಿ PM ಕಿಸಾನ್ ಹಣವನ್ನು ಪಡೆಯಲು ರೈತರು ಒಂದು ಮುಖ್ಯ ವಿಷಯ ಗಮನದಲ್ಲಿಡಬೇಕು. ನಿಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಆಗಿರದಿದ್ದರೆ ಅಥವಾ ಆಧಾರ್‌ಗೆ ಲಿಂಕ್ ಆಗಿರದಿದ್ದರೆ, ಕಂತಿನ ಹಣ ಖಾತೆಗೆ ಜಮೆಯಾಗದ ಸಾಧ್ಯತೆ ಇದೆ.

ಆದ್ದರಿಂದ ಎಲ್ಲಾ ಲಾಭದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಅಪ್‌ಡೇಟ್ ಮಾಡಿಕೊಂಡಿರುವುದನ್ನು ಪರಿಶೀಲಿಸಬೇಕು. ವಿಶೇಷವಾಗಿ e-KYC ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಹಣ ಪಡೆಯುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ಆನ್‌ಲೈನ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡುವ ವಿಧಾನ

ರೈತರು ಮನೆಯಿಂದಲೇ ಸುಲಭವಾಗಿ ತಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಬಹುದು.

ಮೊದಲು PM ಕಿಸಾನ್ ಅಧಿಕೃತ ವೆಬ್‌ಸೈಟ್ pmkisan.gov.in ತೆರೆಯಿರಿ.
ಹೋಮ್ ಪೇಜ್‌ನಲ್ಲಿ ಇರುವ Farmers Corner ವಿಭಾಗಕ್ಕೆ ಹೋಗಿ e-KYC ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಿ.
ಈಗ ಹೊಸ ಮೊಬೈಲ್ ನಂಬರ್ ನಮೂದಿಸಿ Get OTP ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿ ಸಬ್ಮಿಟ್ ಮಾಡಿದರೆ, ನಂಬರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

CSC ಕೇಂದ್ರದಲ್ಲೂ ಅಪ್‌ಡೇಟ್ ಮಾಡಬಹುದು

ಒಂದು ವೇಳೆ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಾಗದಿದ್ದರೆ, ಹತ್ತಿರದ CSC (Common Service Centre) ಗೆ ಹೋಗಿ ಬಯೋಮೆಟ್ರಿಕ್ ಮೂಲಕ e-KYC ಪೂರ್ಣಗೊಳಿಸಿ ಮೊಬೈಲ್ ನಂಬರ್ ಬದಲಾಯಿಸಬಹುದು.

ಯಾವುದೇ ತೊಂದರೆ ಎದುರಾದರೆ PM ಕಿಸಾನ್ ಸಹಾಯವಾಣಿ ಸಂಖ್ಯೆಗಳು 155261 ಅಥವಾ 1800115526 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ರೈತರು ಕಂತಿನ ಹಣ ತಪ್ಪದೇ ಪಡೆಯಲು ಈಗಲೇ ಈ ಪ್ರಕ್ರಿಯೆಯನ್ನು ಪರಿಶೀಲಿಸುವುದು ಉತ್ತಮ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories