India News

ರಸ್ತೆ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರ ಮೇಲೆ ವ್ಯಾನ್ ಹರಿದು 6 ಮಂದಿ ಸಾವು

ರಸ್ತೆ ಸ್ವಚ್ಛತೆ ಕೆಲಸದಲ್ಲಿದ್ದ ಕಾರ್ಮಿಕರ ಮೇಲೆ ವ್ಯಾನ್ ಹರಿದ ಪರಿಣಾಮ ಆರು ಮಂದಿ ಪ್ರಾಣ ಕಳೆದುಕೊಂಡು, ಐದು ಮಂದಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ದೆಹಲಿಯ ಸಮೀಪದಲ್ಲಿ ನಡೆದಿದೆ.

Publisher: Kannada News Today (Digital Media)

ದೇಶದ ರಾಜಧಾನಿ ದೆಹಲಿಯ ಸಮೀಪದ ಫಿರೋಜ್‌ಪುರ್ ಜಿರ್ಕಾ ಪ್ರದೇಶದಲ್ಲಿ ಭಾನುವಾರ ಧಾರುಣ ಘಟನೆ ನಡೆದಿದೆ. ಇಬ್ರಾಹಿಂ ಬಾಸ್ ಗ್ರಾಮದ ಬಳಿ ಸ್ವಚ್ಛತೆಗೆ ತೊಡಗಿದ್ದ ಕಾರ್ಮಿಕರ ಮೇಲೆ ವೇಗವಾಗಿ ಬಂದ ವ್ಯಾನ್ ಹರಿದು ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.

ವ್ಯಾನ್ ಚಾಲಕ ನಿಯಂತ್ರಣ ತಪ್ಪಿ ಕಾರ್ಮಿಕರತ್ತ ಹರಿದು ಬಿದ್ದ ಘಟನೆ ಬಳಿಕ ಸ್ಥಳದಲ್ಲೇ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.. ಚಾಲಕ ಸ್ಥಳದಿಂದ ಪರಾರಿಯಾದ್ದರಿಂದ ಪೊಲೀಸರು ಆತನು ತಪ್ಪಿಸಿಕೊಂಡ ದಿಕ್ಕಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ.

ರಸ್ತೆ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರ ಮೇಲೆ ವ್ಯಾನ್ ಹರಿದು 6 ಮಂದಿ ಸಾವು

ಘಟನೆಯ ತೀವ್ರತೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಗೊಂಡ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಹರಿಯಾಣ ಫಿರೋಜ್‌ಪುರ್ ಜಿರ್ಕಾ ತಾಲೂಕಿನ ಇಬ್ರಾಹಿಂ ಬಾಸ್ ಗ್ರಾಮದ ಹತ್ತಿರ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಈ ದುರ್ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ದೆಹಲಿಯಿಂದ ಅಲ್ವಾರ್ ಕಡೆಗೆ ಸಾಗುತ್ತಿದ್ದ ಪಿಕಪ್ ವ್ಯಾನ್ ಅಕಸ್ಮಾತ್ ನಿಯಂತ್ರಣ ಕಳೆದುಕೊಂಡು, ರೋಡ್ ಕ್ಲೀನಿಂಗ್ ಕಾರ್ಯದಲ್ಲಿದ್ದ ಕಾರ್ಮಿಕರ ಮೇಲೆ ಹರಿದು ಬಿದ್ದಿದೆ.

ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತಪಟ್ಟ ಕಾರ್ಮಿಕರಲ್ಲಿ ಐವರು ಖೇರಿ ಕಲಾಂ ಗ್ರಾಮದವರು ಮತ್ತು ಒಬ್ಬರು ಜಿಮ್ರಾವತ್ ಗ್ರಾಮದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾನಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಈ ಹೃದಯ ವಿದ್ರಾವಕ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ಬೇಸರ ಮೂಡಿದ್ದು, ರಸ್ತೆಯಲ್ಲಿ ಬಿದ್ದಿದ್ದ ಮೃತದೇಹಗಳ ದೃಶ್ಯವು ಎಂತಹವರನ್ನೂ ಬೆಚ್ಚಿಬೀಳಿಸುವಂತಿದೆ

Van Rams Sanitation Workers, Six Dead

English Summary

Our Whatsapp Channel is Live Now 👇

Whatsapp Channel

Related Stories