Karnataka NewsCrime News
ಬೆಳಗಾವಿ: ಮದುವೆ ಮಾಡಿಕೊಡದ ಯುವತಿಯ ತಾಯಿ ಮತ್ತು ಅಣ್ಣನ ಬರ್ಬರ ಹತ್ಯೆ
ಬೆಳಗಾವಿ (Belagavi): ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿ ಹಾಗೂ ಆಕೆಯ ಅಣ್ಣನನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಮಂಗಳಾ ಸುಶಾಂತ ನಾಯ್ಕ (50) ಹಾಗೂ ಅವರ ಪುತ್ರ ಪ್ರಜ್ವಲ್ ನಾಯ್ಕ್ (18) ಮೃತಪಟ್ಟವರು. ಆರೋಪಿ ರವಿ (26) ಗ್ರಾಮದಲ್ಲಿ ಏನೂ ಮಾಡದೆ ತಿರುಗಾಡುತ್ತಿದ್ದ. ಮಂಗಳಾ ನಾಯ್ಕರ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕು ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದ.
ಆದರೆ ಈ ವಿಚಾರವಾಗಿ ತಾಯಿ ಮತ್ತು ಮಗ ನಿರಾಕರಿಸಿದ್ದಾರೆ. ಹಂತಕ ರವಿ ಗುರುವಾರ ಅವರ ಮನೆಗೆ ನುಗ್ಗಿ ತಾಯಿ ಮತ್ತು ಮಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನಿಪ್ಪಾಣಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ದುರ್ಘಟನೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿತ್ತು. ಹಂತಕನಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Belagavi Tragedy: Youth Brutally Kills Mother and Brother Over Marriage Refusal