Karnataka News

ಸಿ.ಟಿ.ರವಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಸಿಐಡಿ ತನಿಖೆ

ಬಿಜೆಪಿ ಎಂಎಲ್ ಸಿ.ಟಿ.ರವಿ (CT Ravi), ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿರುವಾಗ ಹೆಚ್ಚು ಮಾತನಾಡಬಾರದು ಎಂದರು.

ಸಿಐಡಿ ವಾಸ್ತವಾಂಶವನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ ಎಂದರು. ಸಿ.ಟಿ.ರವಿ ಅವಾಚ್ಯ ಶಬ್ಧ ಬಳಸಿಲ್ಲ, ಅಲ್ಲಿ ನಡೆದದ್ದೇ ಬೇರೆ, ಸಿ.ಟಿ ರವಿ ಮಾತುಗಳ ಜತೆಗೆ ಎಲ್ಲ ವಿಷಯಗಳನ್ನೂ ಸಿಐಡಿ ತನಿಖೆ ನಡೆಸಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಕದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದರು.

ಸಿ.ಟಿ.ರವಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಸಿಐಡಿ ತನಿಖೆ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಿ.ಟಿ.ರವಿ ಪ್ರಕರಣ ಮುಚ್ಚಿದ ಅಧ್ಯಾಯ, ಸ್ಪೀಕರ್ ಹಾಗೂ ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

CID investigates CT Ravi Lakshmi Hebbalkar case

Our Whatsapp Channel is Live Now 👇

Whatsapp Channel

Related Stories