ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ
ಮೇ 29ರಂದು ಶಾಲೆಗಳು ಆರಂಭವಾಗಲಿದ್ದು, ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇನ್ನೂ ಮುಂದುವರಿದಿದೆ. ಈ ಕುರಿತು ಪೋಷಕರು ಹಾಗೂ ಶಿಕ್ಷಕರ ಸಂಘಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ.
Publisher: Kannada News Today (Digital Media)
- ಮೇ 29ರಿಂದ ಶಾಲೆಗಳು ಆರಂಭವಾಗಲಿವೆ
- 50,000ಕ್ಕೂ ಹೆಚ್ಚು ಶಿಕ್ಷಕರ ಕೊರತೆಯ ಬಗ್ಗೆ ಶಿಕ್ಷಕರ ಸಂಘ ಕಳವಳ
- ಅತಿಥಿ ಶಿಕ್ಷಕರ ನೇಮಕವೂ ಇಲ್ಲದೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ
ಬೆಂಗಳೂರು (Bengaluru): ಮೇ 29ರಂದು (School reopening) ಗೆ ಶಾಲೆಗಳ ಆರಂಭ ನಿಗದಿಯಾಗಿರುವಾಗ ಶಿಕ್ಷಣ ಇಲಾಖೆ ಇನ್ನೂ ಬಡ್ತಿ ಸಿದ್ಧತೆ ಮಾಡಿಕೊಳ್ಳದ ಸ್ಥಿತಿ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಸರಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ (teacher shortage) ಹೊಸದಿಲ್ಲದಿದ್ರೂ ಈ ಬಾರಿ ಪೂರಕ ಕ್ರಮ ಕೈಗೊಂಡಿಲ್ಲ.
ಹೆಚ್ಚು ಪೋಷಕರು ಈಗ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂಬುದರ ಹಿಂದೆ ಗುಣಮಟ್ಟದ ಶಿಕ್ಷಣದ ಅನಿವಾರ್ಯತೆ ಇದೆ. ಆದರೆ ಈ ನಿರ್ಲಕ್ಷ್ಯದ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ (government schools) ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಷಕರ ಹೋರಾಟ ಸಮಿತಿ ಅಧ್ಯಕ್ಷ ಯೋಗಾನಂದ, “ಅತಿಥಿ ಶಿಕ್ಷಕರ ನೇಮಕವೇ ಇಲ್ಲದೆ, ನುರಿತ ಶಿಕ್ಷಕರಿಗೆ ಆದ್ಯತೆ ಕೊಡದಿದ್ರೆ ಮಕ್ಕಳು ಒಳ್ಳೆಯ ಶಿಕ್ಷಣದಿಂದ ವಂಚಿತರಾಗುತ್ತಾರೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪೊಲೀಸ್ ಆಯುಕ್ತರಿಂದ ಸಿಬ್ಬಂದಿಗೆ ಖಡಕ್ ಎಚ್ಚರಿಕೆ
ಇತ್ತೀಚೆಗಷ್ಟೇ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇಕಡಾ 66ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಈಗಾಗಲೇ ಶಿಕ್ಷಣದ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಎಂಬ ದೂರುಗಳ ನಡುವೆ ಶಿಕ್ಷಕರ ಕೊರತೆ ಮತ್ತಷ್ಟು ಸಮಸ್ಯೆ ಉಂಟುಮಾಡಲಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದಾದ್ಯಂತ ಸುಮಾರು 50,000 ಶಿಕ್ಷಕರ ಕೊರತೆಯಿದೆ ಎಂಬುದನ್ನು ಉಲ್ಲೇಖಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. “ಅಗತ್ಯ ಸಿದ್ಧತೆ ಇಲ್ಲದೆ ಶಾಲೆಗಳನ್ನು ಆರಂಭಿಸಿದರೆ ಮಕ್ಕಳ ಭವಿಷ್ಯವೇ ಪ್ರಶ್ನಾರ್ಥಕವಾಗುತ್ತದೆ,” ಎಂಬ ಎಚ್ಚರಿಕೆ ನೀಡಲಾಗಿದೆ.
ಪೋಷಕರಿಗೆ ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಇಳಿಯುತ್ತಿರುವುದು ಸ್ಪಷ್ಟ. ಹಾಗಾಗಿ ಮಕ್ಕಳ ಓದು ಮೇಲೆ ಪರಿಣಾಮ ಬೀರುವ ಮುನ್ನವೇ ಶಿಕ್ಷಕರ ನೇಮಕಾತಿ ನಿರ್ವಹಣೆ ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ.
Concern Over Teacher Shortage in Karnataka Govt Schools