Karnataka News

ಬೆಳಗಾವಿ ಖಾನಾಪುರ ತಹಶೀಲ್ದಾರ್ ಭ್ರಷ್ಟಾಚಾರ ಆರೋಪದಿಂದ ಅಮಾನತು

ಬೆಳಗಾವಿ ಲೋಕಾಯುಕ್ತ ಪೊಲೀಸರು ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅವರ ಮೇಲೆ ದಾಳಿ ನಡೆಸಿ 4.09 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಿದ ನಂತರ, ಕಂದಾಯ ಇಲಾಖೆ ಅವರ ಅಮಾನತು ಆದೇಶ ಹೊರಡಿಸಿದೆ.

  • ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅಮಾನತು
  • 4.09 ಕೋಟಿ ರೂ. ಕಾನೂನುಬಾಹಿರ ಆಸ್ತಿ ಪತ್ತೆ
  • ರವೀಂದ್ರ ಹಾದಿಮನಿ ಹೊಸ ತಹಶೀಲ್ದಾರ್ ಆಗಿ ನೇಮಕ

ಬೆಳಗಾವಿ (Belagavi): ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ (Tahsildar Prakash Gaikwad) ಅವರು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ. ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಜ.7ರಂದು ಪ್ರಕರಣ ದಾಖಲಾಗಿತ್ತು.

ಜ.8ರಂದು ಲೋಕಾಯುಕ್ತ ಅಧಿಕಾರಿಗಳು ಗಾಯಕವಾಡ ಅವರ ಬೆಳಗಾವಿಯ ಮನೆ, ಖಾನಾಪುರದ ಬಾಡಿಗೆ ಮನೆ, ತಹಶೀಲ್ದಾರ್ ಕಚೇರಿ, ನಿಪ್ಪಾಣಿ ನಿವಾಸ ಸೇರಿದಂತೆ 6 ಕಡೆ ದಾಳಿ ನಡೆಸಿದರು. ಈ ದಾಳಿಯ ವೇಳೆ ಅವರು ಆದಾಯಕ್ಕಿಂತ 4.09 ಕೋಟಿ ರೂ. ಹೆಚ್ಚಿನ ಆಸ್ತಿ ಹೊಂದಿರುವುದು ದೃಢಪಟ್ಟಿತು.

ಬೆಳಗಾವಿ ಖಾನಾಪುರ ತಹಶೀಲ್ದಾರ್ ಭ್ರಷ್ಟಾಚಾರ ಆರೋಪದಿಂದ ಅಮಾನತು

ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ್ ಹೆಚ್.ಜಿ ಅವರು ಗಾಯಕವಾಡ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.

ಅವರ ಸ್ಥಾನಕ್ಕೆ ರವೀಂದ್ರ ಹಾದಿಮನಿ ಅವರನ್ನು ಖಾನಾಪುರದ ಹೊಸ ತಹಶೀಲ್ದಾರ್ ಆಗಿ ನೇಮಿಸಲಾಗಿದೆ. ಆದೇಶ ಹೊರಬಿದ್ದ ತಕ್ಷಣ ಗಾಯಕವಾಡ ಅವರು ತಮ್ಮ ಸರ್ಕಾರಿ ವಾಹನದಲ್ಲಿ ಮನೆಗೆ ತೆರಳಿದರು.

Khanapur Tahsildar Suspended Over Corruption Charges

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories