Bengaluru News

ಕುಸಿತದ ಹಂತದಲ್ಲಿ ಬೆಂಗಳೂರಿನ ಮತ್ತೊಂದು ಕಟ್ಟಡ, ಕೂಡಲೇ ಕೆಡವಲು ಸೂಚನೆ

ಬೆಂಗಳೂರು (Bengaluru): ನಗರದ ಕೃಷ್ಣರಾಜಪುರದಲ್ಲಿ (Krishnarajapuram) ಮತ್ತೊಂದು ಬೃಹತ್ ಕಟ್ಟಡ ಕುಸಿದು ಬೀಳಲು ಸಿದ್ಧವಾಗಿದ್ದು, ಸ್ಥಳೀಯರಿಗೆ ನಿದ್ದೆಯಿಲ್ಲದಂತಾಗಿದೆ. ಐದು ಅಂತಸ್ತಿನ ಕಟ್ಟಡ ಒಂದೆಡೆ ವಾಲುತ್ತಿದೆ. ನಂಜಪ್ಪ ಗಾರ್ಡನ್ ನ ಜನನಿಬಿಡ 4ನೇ ಕ್ರಾಸ್ ನಲ್ಲಿ ಪುಟ್ಟಪ್ಪ ಎಂಬ ವ್ಯಕ್ತಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಿದ್ದಾರೆ.

ಆದರೆ ಅದು ಒಂದು ಕಡೆ ವಾಲಿ ಕೊಂಡಿದೆ. ಯಾವುದೇ ಕ್ಷಣದಲ್ಲಿ ಬೀಳುವ ಅಪಾಯವಿದೆ. ಕಳಪೆ ಕಾಮಗಾರಿ ಅನುಮಾನ ವ್ಯಕ್ತವಾಗಿದ್ದು, ಕಟ್ಟಡ ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಶುರುವಾಗಿದೆ. ಈ ಬಗ್ಗೆ ಸ್ಥಳೀಯರು ಕೂಡ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕುಸಿತದ ಹಂತದಲ್ಲಿ ಬೆಂಗಳೂರಿನ ಮತ್ತೊಂದು ಕಟ್ಟಡ, ಕೂಡಲೇ ಕೆಡವಲು ಸೂಚನೆ

ಕೂಡಲೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮನೆಯ ಮಾಲಿಕನಿಗೆ ಕಟ್ಟಡ ಕೆಡವಲು ಸೂಚನೆ ನೀಡಲಾಗಿದೆ.

ಅಧಿಕಾರಿಗಳ ಒತ್ತಡಕ್ಕೆ ಮಣಿದು ಮಾಲೀಕರು ಆ ಕಟ್ಟಡದಲ್ಲಿ ಇದ್ದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಿದರು. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕಲಾಯಿತು. ಕಟ್ಟಡವನ್ನು ಕೆಡವಲು ಸೂಚಿಸಲಾಗಿದೆ.

ಅಲ್ಲದೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು ಸರಿಯಾದ ಅನುಮತಿ ಇಲ್ಲದೆ ಹಾಗೂ ಕಳಪೆ ಕಾಮಗಾರಿ ಕಟ್ಟಡಗಳನ್ನು ಕಟ್ಟಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Another building in Bengaluru at the point of collapse, immediate demolition notice

Our Whatsapp Channel is Live Now 👇

Whatsapp Channel

Related Stories