ಬೆಂಗಳೂರಿನಲ್ಲಿ ಸಹ ಕಾರ್ಮಿಕನಿಗೆ ಚಾಕು ಇರಿದು ಭೀಕರ ಹತ್ಯೆ ಮಾಡಿ ಪರಾರಿ

ಬೆಂಗಳೂರು ಸಂಪಿಗೆಹಳ್ಳಿಯಲ್ಲಿ ಕೆಲಸದ ವಿಷಯಕ್ಕೆ ಇಬ್ಬರು ಕಾರ್ಮಿಕರ ನಡುವೆ ವಾಗ್ವಾದ ಉಂಟಾಗಿ, ತೀವ್ರ ವಾದ ಚರ್ಚೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

  • ಸಹ ಕಾರ್ಮಿಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ
  • ಘಟನೆ ನಂತರ ಆರೋಪಿ ಸ್ಥಳದಿಂದ ಪರಾರಿ
  • ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ

ಬೆಂಗಳೂರು (Bengaluru): ಸಂಪಿಗೆಹಳ್ಳಿಯ ಆಕಾಶವಾಣಿ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ಜೆಲ್ಲಿ ಮತ್ತು ಮರಳು ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ಸೈಯದ್ ಮೆಹಬೂಬ್ ಪಾಷ (ಮೃತ) ಹಾಗೂ ಖಾನಿಯಾ (ಆರೋಪಿ) ನಡುವಿನ ಮಾತಿನ ಚಕಮಕಿಯು ಕೊಲೆಗೆ ದಾರಿಯಾಯಿತು.

ರಾಜು ಎಂಬಾತನೊಂದಿಗೆ ಕೆಲಸ ಮಾಡುತ್ತಿದ್ದ ಮೆಹಬೂಬ್, ಅವನಿಂದ ಕರೆ ಬಂದ ನಂತರ ಸ್ಥಳಕ್ಕೆ ತೆರಳಿದಾಗ, ಅಲ್ಲಿದ್ದ ಖಾನಿಯಾದೊಂದಿಗೆ ಮಾತಿನ ಚರ್ಚೆ ತೀವ್ರಗೊಂಡಿದೆ. ಗಲಾಟೆ ತಾರಕಕ್ಕೇರಿದಾಗ, ಸಿಮೆಂಟ್ ಚೀಲ ಕತ್ತರಿಸಲು ಬಳಸುತ್ತಿದ್ದ ಚಾಕುವಿನಿಂದ ಖಾನಿಯಾ ಮೆಹಬೂಬ್‌ನನ್ನು ಇರಿದು ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಮೆಹಬೂಬ್‌ನನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ರಾಜು ಮತ್ತು ಖಾನಿಯಾ ಇಬ್ಬರೂ ಸೇರಿ ಈ ಹತ್ಯೆಯನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ತನಿಖೆಯ ಮುಂದುವರಿದಂತೆ ಈ ಕೊಲೆ ಹಿಂದೆ ಮತ್ತೊಂದು ಆಳವಾದ ಕಾರಣವಿದೆಯಾ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Bengaluru Clash Turns Fatal, Worker Stabbed to Death

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories