ಭೂ ಭಾಗ್ಯ ಯೋಜನೆ! ರೈತರಿಗೆ ಕೃಷಿ ಜಮೀನು, ಭೂಮಿ ಖರೀದಿಗೆ ಸಾಲ ಸೌಲಭ್ಯ - Agriculture Loan
₹50 ಸಾವಿರದಿಂದ ₹7.5 ಕೋಟಿ ವರೆಗೂ ಭೂಮಿ ಖರೀದಿಗೆ ಕರ್ನಾಟಕ ಬ್ಯಾಂಕ್ ನೀಡುತ್ತಿರುವ ವಿಶೇಷ ಸಾಲ ಯೋಜನೆ – ಅರ್ಜಿ ವಿಧಾನ, ಷರತ್ತುಗಳು ಹಾಗೂ ಡಾಕ್ಯುಮೆಂಟ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

- ಕೃಷಿ ಭೂಮಿ ಖರೀದಿಗೆ ಶೇ.100 ರಷ್ಟು ಹಣಕಾಸು ಸೌಲಭ್ಯ
- ರೈತರಿಗೆ, ಕೃಷಿ ಸಹಕಾರ ಸಂಘಗಳಿಗೆ ಮರುಪಾವತಿ ಆಯ್ಕೆ ಸಹಿತ ಸಾಲ
- ಕನಿಷ್ಠ ದಾಖಲೆಗಳೊಂದಿಗೆ ವೇಗದ ಸಾಲ ಮಂಜೂರಾತಿ ಪ್ರಕ್ರಿಯೆ
Land Loan Scheme: ರೈತರು ತಮ್ಮ ಕೃಷಿ ಭೂಮಿ (agricultural land Loan) ಖರೀದಿಸಲು ಹಣದ ಕೊರತೆಯಿಂದ ಹಿಂಜರಿಯುವ ಸಂದರ್ಭದಲ್ಲಿ, ಕರ್ನಾಟಕ ಬ್ಯಾಂಕ್ (Karnataka Bank) ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ.
ಈ ಸಾಲದ ಮೂಲಕ ₹50,000 ರಿಂದ ₹7.5 ಕೋಟಿ ವರೆಗೆ ಸಾಲ ಪಡೆದು ಭೂಮಿಯನ್ನು ಖರೀದಿಸುವ (Buy Land) ಅವಕಾಶ ಲಭ್ಯವಿದೆ. ಈ ಯೋಜನೆಯು ರೈತರಿಗೆ ಮತ್ತು ಕೃಷಿ ಸಂಸ್ಥೆಗಳಿಗೆ ಭೂಮಿ ಹೊಂದುವ ಕನಸು ನನಸಾಗಿಸಲು ಅನುವುಮಾಡಿಕೊಡುತ್ತದೆ.
ಅರ್ಜಿದಾರರು ಕರ್ನಾಟಕ (Karnataka) ರಾಜ್ಯದ ನಿವಾಸಿಗಳಾಗಿರಬೇಕು ಎಂಬುದು ಮೊದಲ ಷರತ್ತು. ಜೊತೆಗೆ ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಬ್ಯಾಂಕ್ನಲ್ಲಿ ದೋಷಯುಕ್ತ ಕ್ರೆಡಿಟ್ ಇತಿಹಾಸವಿಲ್ಲದೆ, ಬಾಕಿ ಸಾಲಗಳನ್ನು ತೀರಿಸುವ ಸಾಮರ್ಥ್ಯವೂ ಇರಬೇಕು.
ಇದನ್ನೂ ಓದಿ: ಗೃಹಲಕ್ಷ್ಮಿ ಜೊತೆಗೆ ಮಹಿಳೆಯರಿಗೆ ವ್ಯಾಪಾರ, ಕೃಷಿಗೆ ನೆರವು! ಹೊಸ ಯೋಜನೆ
ಸಾಲ ಮಂಜೂರಿಗೆ ಕೇವಲ ಆದಾರ್, ಪ್ಯಾನ್, ಬ್ಯಾಂಕ್ ಖಾತೆ ವಿವರ, ಭೂಮಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ (online portal) ಅಥವಾ ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ನೀಡಬಹುದು. ಮಂಜೂರಾತಿಗೆ ಭೂಮಿಯ ಮೌಲ್ಯಮಾಪನ ಸಹ ನಡೆಯುತ್ತದೆ.
ಈ ಯೋಜನೆ ಕೇವಲ ರೈತರಿಗೆ ಮಾತ್ರವಲ್ಲದೇ, ಕೃಷಿ ಉತ್ಪಾದನಾ ಕಂಪನಿಗಳು (agri production companies), ರೈತ ಉತ್ಪಾದಕ ಸಂಘಗಳು (FPOs), ಮತ್ತು ಕೃಷಿ ಸಹಕಾರಿ ಸಂಘಗಳಿಗೂ ಅನ್ವಯಿಸುತ್ತದೆ. ಸಹಕಾರ ಸಂಘಗಳಿಗಂತೂ ಶರತ್ತುಗಳೊಂದಿಗೆ ಸಹಾಯ ಲಭ್ಯವಿದೆ.
ಇದನ್ನೂ ಓದಿ: ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ರಿಲೀಫ್! ಕಾನೂನುಬದ್ಧ ಹೊಸ ರೂಲ್ಸ್
ಭೂಮಿಯನ್ನು ಖರೀದಿಸಲು ಬಯಸುವ ಭೂಮಿಯನ್ನೇ ಅಡಮಾನ (Loan collateral) ಆಗಿ ಇಡಬೇಕು. ಸಾಲ ಮಂಜೂರಾತಿ ನಂತರ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಮರುಪಾವತಿ ಆಯ್ಕೆಗಳನ್ನು ನೀಡಲಾಗುತ್ತದೆ – ಇದು ರೈತರ ಹಣದ ಹರಿವಿಗೆ ಅನುಗುಣವಾಗಿ ರೂಪಿಸಲಾಗಿದೆ.
ಈ ಯೋಜನೆಯ ಅಂಶಗಳು ಬಹಳ ಆಕರ್ಷಕವಾಗಿದ್ದು – ಕಡಿಮೆ ದಾಖಲೆ, ವೇಗದ ಮಂಜೂರಾತಿ, ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನ ಮೊದಲಾದವು ರೈತರು ಆರ್ಥಿಕವಾಗಿ ಮುಂದೆ ಸಾಗಲು ಸಹಾಯಮಾಡುವಂತಿವೆ. ಬ್ಯಾಂಕ್ ಮೌಲ್ಯಮಾಪನದ ಮೂಲಕ ಮರುಪಾವತಿ ಸಾಮರ್ಥ್ಯ ಪರಿಶೀಲಿಸಿ ಸಾಲ ಮಂಜೂರು ಮಾಡುತ್ತದೆ.
ಇದನ್ನೂ ಓದಿ: ಕರ್ನಾಟಕದ 23 ಲಕ್ಷ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ! ನಿಮಗೂ ಬಂತಾ
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗೆ, www.karnatakabank.com ಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆಗಳಾದ 1800 425 1444 ಅಥವಾ 1800 572 8031 ಗೆ ಕರೆಮಾಡಬಹುದು. ಅರ್ಜಿ ಸಲ್ಲಿಸಲು ನೇರ ಲಿಂಕ್ ಕೂಡ ಲಭ್ಯವಿದೆ:
🔗 https://karnatakabank.com/kn/agri-rural
ಭೂಮಿ ಖರೀದಿಯ ಕನಸು ಹೊತ್ತಿರುವವರು ಈಗ ಹಣದ ಕೊರತೆಯಿಂದ ಹಿಂಜರಿಯಬೇಕಾಗಿಲ್ಲ. ಸರಳ ನಿಯಮಗಳು ಮತ್ತು ರೈತ ಸ್ನೇಹಿ ಶರತ್ತುಗಳೊಂದಿಗೆ ಈ ಯೋಜನೆ ಭದ್ರ ಭವಿಷ್ಯದ (secured future) ದಾರಿ ತೆರೆಯಲಿದೆ.
ಸರಿಯಾದ ಮಾಹಿತಿಗಾಗಿ ಬ್ಯಾಂಕ್ ಸಂಪರ್ಕಿಸಿ, ಇಲ್ಲಿ ನೀಡಲಾದ ಮಾಹಿತಿ ಆನ್ಲೈನ್ ನಲ್ಲಿ ಲಭ್ಯವಿರುವುದಾಗಿದ್ದು, ನಿಕಟ ಮಾಹಿತಿಗೆ ಬ್ಯಾಂಕ್ ಸಂಪರ್ಕ ಅಗತ್ಯ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Karnataka Bank Agriculture Land Purchase Loan scheme




