Bangalore NewsCrime News

ಬೆಂಗಳೂರು: ಕೆರೆಯಲ್ಲಿ ಯುವತಿ ಅನುಮಾನಸ್ಪದ ಸಾವು, ತಂದೆಯ ಮೇಲೆಯೇ ಅನುಮಾನ!

ಹುಸ್ಕೂರು ಕೆರೆಯಲ್ಲಿ ಬೈಕ್ ಬಿದ್ದು, ಆಕೆಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಪ್ರಿಯಕರನ ಕುಟುಂಬ ಈ ಸಾವನ್ನು ಸಾವು ಅಲ್ಲ, ಹತ್ಯೆ ಎಂದು ಆರೋಪಿಸುತ್ತಿದೆ.

  • ತಂದೆ, ಮಗಳು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹುಸ್ಕೂರು ಕೆರೆಗೆ ಬಿದ್ದ ಘಟನೆ
  • ತಂದೆ ದಡ ಸೇರಿ ಪೊಲೀಸ್ ಠಾಣೆಗೆ ಹೋಗಿದ್ರೆ, ಮಗಳು ನೀರಿನಲ್ಲಿ ಮುಳುಗಿ ಸಾವು
  • ಪ್ರಿಯಕರನ ಕುಟುಂಬ ಪೋಷಕರ ವಿರುದ್ಧ ಹತ್ಯೆ ಆರೋಪ

ಬೆಂಗಳೂರು (Bengaluru): ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಸಹನಾ (21) ಎಂಬ ಯುವತಿ ಕಳೆದ ಒಂದು ವರ್ಷದಿಂದ ನಿತಿನ್ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿ ಇದ್ದಳು. ಈ ವಿಷಯ ಪೋಷಕರಿಗೆ ತಿಳಿದು ಬಂದಾಗ, ತಂದೆ ರಾಮಮೂರ್ತಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಪ್ರೀತಿಗೆ ತಕ್ಷಣ ಒಪ್ಪದ ತಂದೆ, ಮಗಳ ಮೇಲೆ ಹಲ್ಲೆ ಮಾಡಿ, ವಿವಾಹಕ್ಕೆ ಒಪ್ಪುವುದಿಲ್ಲ ಎಂದು ತೀವ್ರ ಒತ್ತಡ ತಂದಿದ್ದರು.

ಬೆಂಗಳೂರು: ಕೆರೆಯಲ್ಲಿ ಯುವತಿ ಅನುಮಾನಸ್ಪದ ಸಾವು, ತಂದೆಯ ಮೇಲೆಯೇ ಅನುಮಾನ!

ಬೆಂಗಳೂರಿನಲ್ಲಿ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಗೆಳೆಯನಿಂದಲೇ ಕೊಲೆ

ಈ ನಡುವೆ ಇಬ್ಬರ ಪ್ರೀತಿಯನ್ನು ಒಪ್ಪಿಸಿಕೊಳ್ಳಲು ಯುವತಿಯ ಪ್ರಿಯಕರನ ತಾಯಿ ಮನವಿ ಮಾಡಿದ್ದರೂ, ಸಹನಾ ತಂದೆ ಮದುವೆಗೆ ಒಪ್ಪಲಿಲ್ಲ. ಈ ಮಧ್ಯೆ 2 ದಿನದ ಹಿಂದೆ, ಈ ವಿಷಯವನ್ನು ಪರಿಹಾರ ಮಾಡುವ ನೆಪದಲ್ಲಿ ಸಹನಾಳನ್ನು ತಂದೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆ ಹುಸ್ಕೂರು ಕೆರೆಯಲ್ಲಿ (Huskur Lake) ಬೈಕ್ ಬಿದ್ದು, ಆಕೆಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಪ್ರಿಯಕರನ ಕುಟುಂಬ ಈ ಸಾವನ್ನು ಸಾವು ಅಲ್ಲ, ಹತ್ಯೆ ಎಂದು ಆರೋಪಿಸುತ್ತಿದೆ.

ಬೆಂಗಳೂರು ಕಾಡುಗೋಡಿಯಲ್ಲಿ 20ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು

ಪೊಲೀಸರ ತನಿಖೆ ಮುಂದುವರಿದಿದೆ

ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ಸಹನಾಳ ತಂದೆ ಈ ಪ್ರಕರಣದಲ್ಲಿ ನಿಜಕ್ಕೂ ಆರೋಪಿಯೇ ಅಥವಾ ನಿಜಕ್ಕೂ ಇದು ಅಪಘಾತವೇ ಎಂಬುದನ್ನು ತನಿಖೆ ಸ್ಪಷ್ಟಪಡಿಸಲಿದೆ.

Mysterious Death of Young Woman in Bengaluru Anekal Lake

English Summary

Our Whatsapp Channel is Live Now 👇

Whatsapp Channel

Related Stories