ಬಡ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಜುಲೈ 20 ಕೊನೆ ದಿನ

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ IDFC FIRST Bank ನಿಂದ ಪ್ರತಿ ವರ್ಷ ₹1 ಲಕ್ಷ – ಎರಡು ವರ್ಷಗಳ MBA ವ್ಯಾಸಂಗಕ್ಕೆ ಒಟ್ಟು ₹2 ಲಕ್ಷ ವಿದ್ಯಾರ್ಥಿವೇತನ ದೊರೆಯಲಿದೆ.

  • ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 20 ಕೊನೆ ದಿನ
  • ಆಯ್ದ ಕಾಲೇಜುಗಳಲ್ಲಿ MBA ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
  • ವಿದ್ಯಾರ್ಥಿವೇತನ ನೇರವಾಗಿ ಕಾಲೇಜು ಖಾತೆಗೆ ಜಮಾ ಮಾಡಲಾಗುವುದು

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ (IDFC FIRST Bank) ವತಿಯಿಂದ ನೀಡಲಾಗುವ ವಿದ್ಯಾರ್ಥಿವೇತನ ಯೋಜನೆಗೆ 2025ರ ಹೊಸ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಆಯ್ಕೆಯಾದ MBA ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹1 ಲಕ್ಷವಂತೆ ಎರಡು ವರ್ಷಗಳ ಕಾಲ ₹2 ಲಕ್ಷವರೆಗೆ ಹಣಕಾಸು ಸಹಾಯ (Education scholarship) ನೀಡಲಾಗುತ್ತದೆ.

ಅಭ್ಯರ್ಥಿಗಳು ಭಾರತದ ನಿವಾಸಿಯಾಗಿದ್ದು, ಆಯ್ದ MBA College ಗಳಲ್ಲಿ ಮೊದಲ ವರ್ಷದ ಪೂರ್ಣಕಾಲಿಕ ಕೋರ್ಸ್‌ಗೆ (full-time MBA course) ಪ್ರವೇಶ ಪಡೆದವರಾಗಿರಬೇಕು.

ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂಬುದು ಪ್ರಮುಖ ಶರತ್ತು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20, 2025 ಆಗಿದೆ.

ಇದನ್ನೂ ಓದಿ: ಬರೀ ₹4799ಕ್ಕೆ ಮನೆಗೆ ತನ್ನಿ ಸ್ಮಾರ್ಟ್ ಟಿವಿ, ಇಷ್ಟು ಕಮ್ಮಿ ಬೆಲೆಗೆ ಮತ್ತೆ ಸಿಗೋಲ್ಲ

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು www.buddy4study.com ಮೂಲಕ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಿಂದ ಅರ್ಜಿ ಸಲ್ಲಿಸಬಹುದು. ಹೊಸ ಉಪಯೋಗದಾರರು ಖಾತೆ ರಚಿಸಿ, ಲಾಗಿನ್ ಆಗಿ, ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿ ಸಬ್ಮಿಟ್ ಮಾಡಬಹುದು.

Education Scholarship

ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್ (Aadhaar Card)
  2. ಪಾಸ್‌ಪೋರ್ಟ್ ಅಳತೆಯ ಫೋಟೋ
  3. ಬ್ಯಾಂಕ್ ಪಾಸ್ ಬುಕ್ (bank passbook)
  4. ಕಾಲೇಜು ಪ್ರವೇಶ ದೃಢೀಕರಣ ಪತ್ರ
  5. ಫೀ ಸ್ಟ್ರಕ್ಚರ್ / College Fee Structure
  6. 12ನೇ ತರಗತಿಯ ಅಂಕಪಟ್ಟಿ
  7. ಕುಟುಂಬದ ಆದಾಯ ಪ್ರಮಾಣ ಪತ್ರ
  8. ಮೊಬೈಲ್ ನಂಬರ್, ಇ-ಮೇಲ್ ವಿಳಾಸ

ಇದನ್ನೂ ಓದಿ: ಕೇವಲ ₹4 ಸಾವಿರಕ್ಕೆ ಬ್ರಾಂಡೆಡ್ ಏರ್ ಕೂಲರ್‌ಗಳು! ಬಂಪರ್ ರಿಯಾಯಿತಿ

ವಿಶೇಷ ಸೂಚನೆಗಳು:

ವಿದ್ಯಾರ್ಥಿವೇತನದ ಹಣವನ್ನು ನೇರವಾಗಿ ಕಾಲೇಜು ಖಾತೆಗೆ (Bank Account) ವರ್ಗಿಸಲಾಗುತ್ತದೆ. ವಿದ್ಯಾರ್ಥಿಗಳು ಮೊದಲ ವರ್ಷ ಪಾಸ್ ಆಗಿ ಎರಡನೇ ವರ್ಷಕ್ಕೆ ಬಡ್ತಿ ಹೊಂದಿದರೆ, ಎರಡನೇ ವರ್ಷದ ಸಹಾಯಧನವೂ ಲಭಿಸುತ್ತದೆ. ಬ್ಯಾಂಕ್ ನ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಅದರ ಆಯ್ಕೆ ಮೇರೆಗೆ ಇರುತ್ತದೆ.

2 Lakh Scholarship for MBA Students from IDFC FIRST Bank

======== Story End ========

Writer of This Story

Author of the Story
About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್ ಸುದ್ದಿಗಳ ಜಗತ್ತಿನಲ್ಲಿ ಗಾಢ ಜ್ಞಾನ ಹೊಂದಿದ್ದಾರೆ. ಹಣಕಾಸು ಮತ್ತು ಬ್ಯಾಂಕಿಂಗ್ ವಿಷಯಗಳನ್ನು ಸ್ಪಷ್ಟವಾಗಿ, ನಿಖರವಾಗಿ ಓದುಗರಿಗೆ ತಲುಪಿಸುತ್ತಾರೆ... ಇನ್ನಷ್ಟು ಓದಿ

✉︎ Feedback: saiteja@kannadanews.today

For Article Corrections/Report Issues Click here

Related Stories