ತಿಂಗಳಿಗೆ ₹3000 ಪಿಂಚಣಿ ಸಿಗುತ್ತೆ! ಶ್ರಮ ಯೋಗಿ ಯೋಜನೆಗೆ ಈಗಲೇ ಅರ್ಜಿ ಹಾಕಿ - Pension Scheme

ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ, ಕಡಿಮೆ ಹೂಡಿಕೆಯಿಂದ ತಿಂಗಳಿಗೆ ₹3000 ಪಿಂಚಣಿ ನೀಡಲಿದೆ.

  • ಶ್ರಮ ಯೋಗಿ ಯೋಜನೆಗೆ ಅರ್ಜಿ ಸಲ್ಲಿಸಿ, ₹3000 ಪಿಂಚಣಿ ಪಡೆಯಿರಿ
  • ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಬಲ
  • ಸೇವಾ ಕೇಂದ್ರ ಅಥವಾ ಆನ್‌ಲೈನ್ ಮೂಲಕ ನೋಂದಣಿ ಸಾಧ್ಯ

Pension Scheme : ಆರ್ಥಿಕ ಬಿಕ್ಕಟ್ಟಿನ ನಡುವೆ ವಯೋವೃದ್ಧರಿಗಾಗಿ ಭಾರತ ಸರ್ಕಾರ ಶ್ರಮಯೋಗಿ ಮಾನ್‌ಧನ್ ಯೋಜನೆ ರೂಪಿಸಿದ್ದು, ಈ ಯೋಜನೆಯ ಲಾಭ ಪಡೆದರೆ ವೃದ್ಧಾಪ್ಯದಲ್ಲಿ ತಿಂಗಳಿಗೆ ₹3000 ಪಿಂಚಣಿ ಭದ್ರವಾಗಿರುತ್ತದೆ.

2019 ರಲ್ಲಿ ಆರಂಭವಾದ ಈ ಯೋಜನೆಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಭದ್ರತೆ ನೀಡುವುದು. ಬೀದಿ ವ್ಯಾಪಾರಿ, ರಿಕ್ಷಾ ಚಾಲಕ, ಕೃಷಿ ಕಾರ್ಮಿಕ, ಬೀಡಿ ಕಾರ್ಮಿಕ, ಕಟ್ಟಡ ಕಾರ್ಮಿಕರು ಈ ಯೋಜನೆಯ ಪ್ರಮುಖ ಫಲಾನುಭವಿಗಳು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಇದ್ದರೆ ಸಾಕು. ಹತ್ತಿರದ CSC ಕೇಂದ್ರದಲ್ಲಿ ಅಥವಾ https://maandhan.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿಯ ನಂತರ ಶ್ರಮಯೋಗಿ ಕಾರ್ಡ್ ಹಾಗೂ ಖಾತೆ ಸಂಖ್ಯೆ ಸಿಗುತ್ತದೆ.

ಇದನ್ನೂ ಓದಿ: ರೈತರಿಗೆ ಹೈನುಗಾರಿಕೆ ಸಾಲ, ಡೇರಿ ಉದ್ಯಮಕ್ಕೆ 25 ಲಕ್ಷವರೆಗೆ ಸಬ್ಸಿಡಿ ಲೋನ್ ಸೌಲಭ್ಯ

ಯೋಜನೆಯ ಮತ್ತೊಂದು ವಿಶೇಷತೆ ಅಂದರೆ, ಪತಿ ಅಥವಾ ಪತ್ನಿಯು ಮೃತರಾದರೆ ಅವರ ಬದಲಿ 50% ಪಿಂಚಣಿಯನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆ. ಜೊತೆಗೆ, LIC ಮತ್ತು CSC ಸಂಸ್ಥೆಗಳು ಈ ಯೋಜನೆಯ ನಿರ್ವಹಣೆಯನ್ನು ಮಾಡುತ್ತಿವೆ.

ಈ ಯೋಜನೆಗೆ 18 ರಿಂದ 40 ವರ್ಷದೊಳಗಿನವರು ಅರ್ಹರು. ಅವರ ಮಾಸಿಕ ಆದಾಯ ₹15,000 ಕ್ಕಿಂತ ಕಡಿಮೆ ಇರಬೇಕು. ಪಾವತಿಯು ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ:

18 ವರ್ಷ: ₹55/ತಿಂಗಳು
29 ವರ್ಷ: ₹100/ತಿಂಗಳು
40 ವರ್ಷ: ₹200/ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ.

60 ವರ್ಷ ತಲುಪಿದ ಬಳಿಕ, ಸರ್ಕಾರಿ ಸಹಾಯಧನದೊಂದಿಗೆ ತಿಂಗಳಿಗೆ ₹3000 ಪಿಂಚಣಿಯನ್ನು ಪಡೆಯಬಹುದು. ಈವರೆಗೆ 46 ಲಕ್ಷಕ್ಕೂ ಹೆಚ್ಚು ಜನರು ಯೋಜನೆಗೆ ಸೇರಿದ್ದಾರೆ.

ಇದನ್ನೂ ಓದಿ: ಒಮ್ಮೆ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000 ಸಿಗುತ್ತೆ! ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್

ಇನ್ನೊಂದು ವಿಶೇಷತೆ, ನೀವು ಕೊಡುವಷ್ಟು ಸರಕಾರವೂ ಕೊಡುಗೆ ನೀಡುತ್ತದೆ! ಆದರೆ, EPFO, NPS ಅಥವಾ ESIC ಸದಸ್ಯರಾಗಿದ್ದರೆ, ಹಾಗೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ.

10 ವರ್ಷಗಳಲ್ಲಿ ಯೋಜನೆಯಿಂದ ಹೊರಬರಬೇಕಾದರೆ ಪಾವತಿಸಿದ ಮೊತ್ತವನ್ನು ಬಡ್ಡಿಯೊಂದಿಗೆ ವಾಪಸ್ ಪಡೆಯಬಹುದು. ಇದೊಂದು ನಿಖರವಾಗಿ ಯೋಜಿತ ಪಿಂಚಣಿ ಯೋಜನೆಯಾಗಿದ್ದು, ನಿವೃತ್ತಿ ದಿನಗಳಲ್ಲಿ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಲು ಸಹಾಯಕವಾಗುತ್ತದೆ.

Get Monthly Pension with This Simple Government Scheme

English Summary

======== Story End ========

Writer of This Story

Author of the Story
About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್ ಸುದ್ದಿಗಳ ಜಗತ್ತಿನಲ್ಲಿ ಗಾಢ ಜ್ಞಾನ ಹೊಂದಿದ್ದಾರೆ. ಹಣಕಾಸು ಮತ್ತು ಬ್ಯಾಂಕಿಂಗ್ ವಿಷಯಗಳನ್ನು ಸ್ಪಷ್ಟವಾಗಿ, ನಿಖರವಾಗಿ ಓದುಗರಿಗೆ ತಲುಪಿಸುತ್ತಾರೆ... ಇನ್ನಷ್ಟು ಓದಿ

✉︎ Feedback: saiteja@kannadanews.today

For Article Corrections/Report Issues Click here

Related Stories