ರೇಷನ್ ಕಾರ್ಡ್ ಇಂದ ಪ್ರತಿತಿಂಗಳು ಅಕ್ಕಿ ಪಡೆಯುವವರಿಗೆ ಹೊಸ ನಿಯಮ! ಖುಷಿಯಲ್ಲಿ ಜನತೆ!
ರೇಷನ್ ಕಾರ್ಡ್ ಇರುವವರಿಗೆ ಹೊಸದೊಂದು ಅನುಕೂಲ ಮಾಡಿಕೊಡಲಾಗುತ್ತಿದ್ದು, ಈ ಕಾಂಗ್ರೆಸ್ ಸರ್ಕಾರ ಕಾರಣಕ್ಕೆ ರೇಷನ್ ಕಾರ್ಡ್ ಗೆ ಕೊಡುವ ಆಹಾರ ಧಾನ್ಯಗಳ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ..
ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ನಂತರ ರೇಷನ್ ಕಾರ್ಡ್ (Ration Card) ಇರುವ ಎಲ್ಲರಿಗು ಸಾಕಷ್ಟು ಯೋಜನೆಗಳನ್ನು ತರುತ್ತಿದೆ. ಹೊಸ ಸೌಲಭ್ಯಗಳಿಂದ ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುತ್ತಿದೆ. ರೇಷನ್ ಕಾರ್ಡ್ ಇಂದ ಸಿಗುತ್ತಿದ್ದ ಮುಖ್ಯವಾದ ಅನುಕೂಲ ಅಕ್ಕಿ ಮತ್ತು ಇನ್ನಿತರ ಆಹಾರ ಪದಾರ್ಥಗಳು.
ಇದೀಗ ಸರ್ಕಾರವು ರೇಷನ್ ಕಾರ್ಡ್ ವಿಷಯದಲ್ಲಿ ಇನ್ನಷ್ಟು ಅನುಕೂಲಗಳನ್ನು ಜನರಿಗೆ ಕೊಡಲು ಸಿದ್ಧವಾಗಿದೆ. ರಾಜ್ಯ ಆಹಾರ ಇಲಾಖೆ ಜನರಿಗಾಗಿ ಈಗ ಮಹತ್ವದ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಎಲ್ಲಾ ಜನರ ಆರೋಗ್ಯ ಬಹಳ ಮುಖ್ಯ, ಆರೋಗ್ಯ ಒಂದಿದ್ದರೆ ಬೇರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎನ್ನುವುದು ನಂಬಿಕೆ.
ಹಾಗಾಗಿ ಜನರ ಆರೋಗ್ಯದ ಮೇಲಿನ ಕಾಳಜಿ ಇಂದ ರೇಷನ್ ಕಾರ್ಡ್ ಇರುವವರಿಗೆ ಹೊಸದೊಂದು ಅನುಕೂಲ ಮಾಡಿಕೊಡಲಾಗುತ್ತಿದ್ದು, ಈ ಕಾರಣಕ್ಕೆ ರೇಷನ್ ಕಾರ್ಡ್ ಗೆ ಕೊಡುವ ಆಹಾರ ಧಾನ್ಯಗಳ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ..ಕಾಂಗ್ರೆಸ್ ಸರ್ಕಾರ ತಂದಿರುವ ಅನ್ನಭಾಗ್ಯ ಯೋಜನೆಯ ಸೌಲಭ್ಯ ಬಿಪಿಎಲ್ (BPL) ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ (Anthyodaya Card) ಹೊಂದಿರುವ ರಾಜ್ಯದ ಎಲ್ಲಾ ಜನರಿಗೆ ಸಿಗಲಿದೆ..
ರಾಜ್ಯ ಸರ್ಕಾರ ಆರಂಭದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರೇಶನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು, ಆದರೆ 10 ಕೆಜಿ ಕೊಡುವುದು ಸಾಧ್ಯವಾಗದ ಕಾರಣ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿಯ ಹಣವನ್ನು ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ನಿರ್ಧಾರ ತೆಗೆದುಕೊಳ್ಳುಲಾಗಿತ್ತು. ಆದರೆ 5ಕೆಜಿ ಅಕ್ಕಿಯ ಹಣ ಎಲ್ಲರಿಗೂ ಸಿಗುತ್ತಿಲ್ಲ.
ನಮ್ಮ ರಾಜ್ಯದಲ್ಲಿ ಸುಮಾರು 4ಕೋಟಿಗಿಂತ ಹೆಚ್ಚು ಕುಟುಂಬಗಳ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದೆ, ಅವರಿಗೆಲ್ಲಾ 10ಕೆಜಿ ಅಕ್ಕಿ ನೀಡುವ ಭರವಸೆ ಕೊಟ್ಟಿದ್ದರು ಸಹ, ಅದು ಸಾಧ್ಯವಾಗದೆ, 5ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿಯ ಹಣ ಕೊಡುವುದಾಗಿ ಹೇಳಲಾಗಿತ್ತು, ಆದರೆ ಇಷ್ಟು ರೇಷನ್ ಕಾರ್ಡ್ ಗಳ ಪೈಕಿ, 22 ಲಕ್ಷ ರೇಶನ್ ಕಾರ್ಡ್ ಹೊಂದಿರುವ ಕುಟುಂಬಗಳ ಹತ್ತಿರ ಬ್ಯಾಂಕ್ ಅಕೌಂಟ್ ಇಲ್ಲ ಎಂದು ತಿಳಿದುಬಂದಿದೆ.
ಈಗಾಗಲೇ ಸರ್ಕಾರ ಸೂಚನೆ ನೀಡಿದ್ದ ಹಾಗೆ, ಬ್ಯಾಂಕ್ ಅಕೌಂಟ್ ಇಲ್ಲದೆ ಇರುವರಿಗೆ, ಬ್ಯಾಂಕ್ ಅಕೌಂಟ್ ನಿಷ್ಕ್ರಿಯವಾಗಿರುವವರಿಗೆ, ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗದೆ ಇರುವವರಿಗೆ ಹಣ ವರ್ಗಾವಣೆ ಆಗುವುದಿಲ್ಲ. ಇನ್ನು ಕೆಲವು ಜನರ ಬ್ಯಾಂಕ್ ಅಕೌಂಟ್ ಗೆ ಅಕ್ಕಿಯ ಬದಲಾಗಿ ಬರಬೇಕಾದ ಹಣವು ಬಂದಿಲ್ಲ.
ಬ್ಯಾಂಕ್ ಗೆ ಹೋಗಿ ವಿಚಾರಿದಿದರೆ, ಅಕೌಂಟ್ ಆಕ್ಟಿವ್ ಇರದ ಕಾರಣ ಹಣ ಬಂದಿಲ್ಲ ಎಂದು ಹೇಳಲಾಗಿದ್ದು, ಜನರು ಇದರಿಂದ ಬೇಸರವಾಗಿದ್ದಾರೆ. ಹಾಗಾಗಿ ಇಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿರುವುದು ಮುಖ್ಯವಾಗುತ್ತದೆ. ಈಗ ಹೆಚ್ಚಿನ ಜನರಿಗೆ ಹಣವು ಸಿಗದ ಕಾರಣ, ರಾಷ್ಟ್ರದ ಆಹಾರ ಇಲಾಖೆಯಲ್ಲಿ ಅಕ್ಕಿಯ ಲಭ್ಯತೆ ಹೇಗಿದೆ ಎನ್ನುವುದನ್ನು ತಿಳಿದು ಸರ್ಕಾರವು ರಾಜ್ಯದ ಜನತೆಗೆ ಅಕ್ಕಿಯನ್ನು ವಿತರಣೆ ಮಾಡಲಿದೆ. ಹಾಗಾಗಿ ಪಡಿತರ ಚೀಟಿ ಹೊಂದಿರುವ ಜನರು ಆತಂಕಕ್ಕೆ ಒಳಗಾಗದೆ, ಈ ತಿಂಗಳು ನೀವು ರೇಶನ್ ಕಾರ್ಡ್ ಮೂಲಕ ರೇಷನ್ ಕೊಂಡುಕೊಳ್ಳಬಹುದು.
Ration card new rules
Follow us On
Google News |