ಮದುವೆಯಾದ ಕೆಲವೇ ಗಂಟೆಗಳಲ್ಲಿ ಹಣ, ಆಭರಣದೊಂದಿಗೆ ಹುಡುಗಿ ಎಸ್ಕೇಪ್
ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ವಿವಾಹ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ, ಆಭರಣಗಳೊಂದಿಗೆ ನಾಪತ್ತೆಯಾಗಿದ್ದು, ಮೋಸಹೋದ ವರ ಪೊಲೀಸರಿಗೆ ದೂರು ನೀಡಿದ್ದಾರೆ.

- ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ನಾಪತ್ತೆ
- 1.50 ಲಕ್ಷ ರೂ. ಹಾಗೂ ಚಿನ್ನಾಭರಣ ಎಗರಿಸಿದ ಆರೋಪ
- ವಧು ಮತ್ತು ಮಧ್ಯವರ್ತಿ ಸಂಪರ್ಕಕ್ಕೆ ಸಿಗುತ್ತಿಲ್ಲ
ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ಮತ್ತೊಂದು ವಿವಾಹ ವಂಚನೆಯ ಘಟನೆ ನಡೆದಿದೆ. ಸಾಹಿ ಗ್ರಾಮದ ಯುವಕನೊಬ್ಬ ಮದುವೆಯ ನಿಶ್ಚಯ ಮಾಡಿಕೊಟ್ಟ ವ್ಯಕ್ತಿಯೂ, ತಾನು ವಿವಾಹವಾದ ವಧುವೂ ತನ್ನ ಹಣ ಮತ್ತು ಚಿನ್ನಾಭರಣ ಎಗರಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕನ ಪ್ರಕಾರ, ವಿವಾಹ ನಿಶ್ಚಿತಾರ್ಥದ ವೇಳೆ ವಧು ಮತ್ತು ಮಧ್ಯವರ್ತಿಗೆ 1.50 ಲಕ್ಷ ರೂಪಾಯಿ ನೀಡಲಾಗಿತ್ತು. ನಂತರ, 2024ರ ಡಿಸೆಂಬರ್ 13ರಂದು ಯುವಕನು ಹರಿಯಾಣದ ಯಮುನಾ ನಗರ ಮೂಲದ ವಧುವನ್ನು ತನ್ನ ಗ್ರಾಮದ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡನು.
ಕಾರಿನ ಟೈರ್ ಸ್ಫೋಟಗೊಂಡು ಭೀಕರ ಅಪಘಾತ – 7 ಮಂದಿ ದುರ್ಮರಣ
ಆದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ, ವಧು ತನ್ನ ತಾಯಿಯ ಆರೋಗ್ಯ ಹದಗೆಟ್ಟಿದೆ ಎಂಬ ಕಾರಣ ನೀಡಿ, ಕೆಲವು ದಿನಗಳಲ್ಲಿ ಮರಳುವುದಾಗಿ ಹೇಳಿ, ಹಣ ಮತ್ತು ಆಭರಣಗಳನ್ನು ತೆಗೆದುಕೊಂಡು ಹೊರಟಳು. ಬಳಿಕ, ಆಕೆಯೊಂದಿಗೆ ಸಂಪರ್ಕಿಸಲು ಯತ್ನಿಸಿದರೂ, ಫೋನ್ ಸ್ವಿಚ್ಆಫ್ ಆಗಿದ್ದು, ಯಾವುದೇ ಸುಳಿವೂ ಇಲ್ಲದೆ ನಾಪತ್ತೆಯಾಗಿದ್ದಾಳೆ.
ಇದೀಗ, ಮದುವೆ ನಿಶ್ಚಯ ಮಾಡಿಕೊಟ್ಟ ವ್ಯಕ್ತಿಯೂ ವಧುವನ್ನು ಕರೆತರಲು ಯಾವುದೇ ಪ್ರಯತ್ನ ಮಾಡದೇ, ಫೋನ್ ಕರೆಗಳಿಗೆ ಉತ್ತರಿಸುತ್ತಿಲ್ಲ. ಈ ಕುರಿತು ವರ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.
Bride Disappears Hours After Wedding



