India News

ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ಡೆಹ್ರಾಡೂನ್ (Kannada News): ಉತ್ತರಾಖಂಡದಲ್ಲಿ ಧಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರಕಾಶಿ ಜಿಲ್ಲೆಯ ಮೋರಿ ಪ್ರದೇಶದಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನಿಗೆ ಸ್ಥಳೀಯರು ತೀವ್ರ ಕಿರುಕುಳ ನೀಡಿದ್ದಾರೆ. ಬಾಧಿತ ವ್ಯಕ್ತಿಯನ್ನು ಬೈನೋಲ್ ಗ್ರಾಮದ ಆಯುಷ್ (22) ಎಂದು ಗುರುತಿಸಲಾಗಿದೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ಮೇಲ್ಜಾತಿಯ ಜನರು ಸುತ್ತುವರೆದು ಥಳಿಸಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಜನವರಿ 9 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಲಿತನಾದ ಆಯುಷ್ ಸಾಲ್ರಾ ಗ್ರಾಮದ ದೇವಸ್ಥಾನಕ್ಕೆ ಪ್ರವೇಶಿಸಿದಾಗ ಆಕ್ರೋಶಗೊಂಡ ಮೇಲ್ಜಾತಿಯವರು ರಾತ್ರಿಯಿಡೀ ಆತನನ್ನು ಕಟ್ಟಿಹಾಕಿ ತೀವ್ರವಾಗಿ ಥಳಿಸಿದ್ದಾರೆ. ತನ್ನ ಮೇಲೆ ಸುಡುವ ಕೋಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆಯುಷ್ ಬಹಿರಂಗಪಡಿಸಿದ್ದಾರೆ.

Dalit Youth Tied Up Tortured With Burning Sticks For Entering Temple

ಇದನ್ನೂ ಓದಿ: ಕನ್ನಡ ಸುದ್ದಿ ಮುಖ್ಯಾಂಶಗಳು, ಲೈವ್ ನ್ಯೂಸ್ ಪ್ರಸಾರ 14 01 2023 07:32

ಮರುದಿನ ಬೆಳಿಗ್ಗೆ ಸಂತ್ರಸ್ತನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ಉತ್ತರಾಖಂಡ ಎಸ್ಪಿ ಅರ್ಪಣ್ ಯಧುವಂಶಿ ಅವರು ಗ್ರಾಮದ ಐವರ ವಿರುದ್ಧ ಎಸ್ಸಿ ಮತ್ತು ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬಹಿರಂಗಪಡಿಸಿದರು.

Dalit Youth Tied Up Tortured With Burning Sticks For Entering Temple

Our Whatsapp Channel is Live Now 👇

Whatsapp Channel

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ