ಕಲ್ಲಕುರುಚಿ ಹಿಂಸಾಚಾರ.. ವಿದ್ಯಾರ್ಥಿನಿಯ ಮೃತದೇಹ ತಾಯಿಗೆ ಹಸ್ತಾಂತರ
ತಮಿಳುನಾಡಿನ ಕಲ್ಲಕುರುಚಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 12ನೇ ತರಗತಿ ವಿದ್ಯಾರ್ಥಿನಿಯ ಮೃತದೇಹವನ್ನು ಇಂದು ಕಡಲೂರು ಜಿಲ್ಲೆಯ ಆಕೆಯ ಹುಟ್ಟೂರಿಗೆ ಕೊಂಡೊಯ್ಯಲಾಯಿತು.
ಚೆನ್ನೈ: ತಮಿಳುನಾಡಿನ ಕಲ್ಲಕುರುಚಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 12ನೇ ತರಗತಿ ವಿದ್ಯಾರ್ಥಿನಿಯ ಮೃತದೇಹವನ್ನು ಇಂದು ಕಡಲೂರು ಜಿಲ್ಲೆಯ ಆಕೆಯ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಇಂದು ಆಕೆಯ ಮೃತದೇಹದ ಅಂತಿಮ ಸಂಸ್ಕಾರವನ್ನು ಸಂಬಂಧಿಕರು ನೆರವೇರಿಸಲಿದ್ದಾರೆ.
ನ್ಯಾಯಾಲಯದ ಆದೇಶದಂತೆ ವಿದ್ಯಾರ್ಥಿನಿಯ ಶವವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ಸಾವಿನ ನಂತರ ಕಲ್ಲಕುರುಚಿಯಲ್ಲಿ ಭಾರೀ ವಿನಾಶ ಸೃಷ್ಟಿಯಾಗಿತ್ತು. ನೂರಾರು ಶಾಲಾ ಬಸ್ಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು.
ಮೃತ ದೇಹವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಯ ತಾಯಿಯಿಂದ ಸಹಿ ತೆಗೆದುಕೊಳ್ಳಲಾಗಿದೆ. ಮೃತದೇಹ ಸ್ವಗ್ರಾಮ ತಲುಪಿದ ಬಳಿಕ ಸಂಬಂಧಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
kallakurichi girls dead body reaches her native village in cuddalore district for last rites
Follow us On
Google News |
Advertisement