ಬಾಡಿಗೆ ಪಾವತಿಸದ ಕಾರಣಕ್ಕೆ ಬ್ಯಾಂಕ್ಗೆ ಬೀಗ ಜಡಿದ ಕಟ್ಟಡ ಮಾಲೀಕರು
ಬಾಡಿಗೆ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಬ್ಯಾಂಕ್ಗೆ ಬೀಗ ಜಡಿದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದುರಾಲಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಲಕ್ನೋ: ಬಾಡಿಗೆ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಬ್ಯಾಂಕ್ಗೆ ಬೀಗ ಜಡಿದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದುರಾಲಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬಾಡಿಗೆ ಪಾವತಿಸದ ಕಾರಣಕ್ಕೆ ಮಾಲೀಕರು ಜಿಲ್ಲಾ ಸಹಕಾರ ಬ್ಯಾಂಕ್ ನ ಸಾಕೋಟಿ ಶಾಖೆಗೆ ಬೀಗ ಜಡಿದಿದ್ದಾರೆ. ಕಟ್ಟಡದ ಮಾಲೀಕ ಕಿರಣಪಾಲ್ ಸಿಂಗ್ ಅವರು ತಮ್ಮ ಕಟ್ಟಡವನ್ನು ಸಹಕಾರಿ ಬ್ಯಾಂಕ್ ಶಾಖೆಗೆ ಬಾಡಿಗೆಗೆ ನೀಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಗುತ್ತಿಗೆ ವಿಚಾರವಾಗಿ ಜಮೀನು ಮಾಲೀಕರು ಹಾಗೂ ಬ್ಯಾಂಕ್ ನಡುವೆ ಜಗಳ ನಡೆಯುತ್ತಿತ್ತು. ಬಾಡಿಗೆ ಪಾವತಿಸುವವರಿಗೆ ಬ್ಯಾಂಕ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಕಟ್ಟಡ ಮಾಲೀಕ ಸಿಂಗ್ ಬುಧವಾರ ಬ್ಯಾಂಕ್ಗೆ ಬೀಗ ಹಾಕಿದ್ದರು. ಆದರೆ ಮನವಿ ಮೇರೆಗೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು ಬ್ಯಾಂಕ್ ಬೀಗ ತೆರೆದರು. 2007ರಲ್ಲಿ ಕಟ್ಟಡವನ್ನು ಬ್ಯಾಂಕ್ಗೆ ಗುತ್ತಿಗೆ ನೀಡುವ ಒಪ್ಪಂದವೂ ಮುಗಿದಿದೆ ಎಂದು ಜಮೀನು ಮಾಲೀಕರು ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ ಎಂದರು. ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದ ಬೇಸರಗೊಂಡ ಮಾಲೀಕರು ಬ್ಯಾಂಕ್ಗೆ ಬೀಗ ಜಡಿದಿದ್ದಾರೆ. ಕೊನೆಗೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಮಣಿಂದರ್ ಪಾಲ್ ಸಿಂಗ್ ಮನವಿ ಮೇರೆಗೆ ಬ್ಯಾಂಕ್ ತೆರೆಯಲು ಮಾಲೀಕರು ಒಪ್ಪಿಗೆ ಸೂಚಿಸಿದರು.
Building Owner Locks Bank Over Non Payment Of Rent
Follow us On
Google News |