Amarinder Singh: ಪಂಜಾಬ್ನಲ್ಲಿ ಯಾರೂ ಸುರಕ್ಷಿತವಾಗಿಲ್ಲ, ಎಎಪಿ ಸರ್ಕಾರದ ವಿರುದ್ಧ ಅಮರಿಂದರ್ ಸಿಂಗ್ ಕಿಡಿ
ಚಂಡೀಗಢ: ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh) ಕಿಡಿಕಾರಿದ್ದಾರೆ. ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ವರದಿಗೆ ಅವರು ಪ್ರತಿಕ್ರಿಯಿಸಿದರು. ಅವರ ಬರ್ಬರ ಹತ್ಯೆ ಆಘಾತಕಾರಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಎಎಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ‘ಅಲ್ಲದೆ ಪಂಜಾಬ್ನಲ್ಲಿ ಯಾರೂ ಸುರಕ್ಷಿತವಾಗಿಲ್ಲ… ಎಂದಿದ್ದಾರೆ.
ತಮ್ಮ ಪಕ್ಷದ ನಾಯಕ, ಗಾಯಕ ಸಿಧು ಮೂಸೆವಾಲಾ ಗುಂಡಿನ ಹತ್ಯೆಯಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಿದೆ. ಇದು ಪಕ್ಷಕ್ಕೆ ಮತ್ತು ದೇಶಕ್ಕೆ ಆಘಾತಕಾರಿ ಸುದ್ದಿ ಎಂದಿದ್ದಾರೆ. ಸಿಧು ಹತ್ಯೆಗೆ ಎಎಪಿ ಮುಖ್ಯಸ್ಥ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ನಾಯಕ ರಾಘವ್ ಚಡ್ಡಾ ಕಾರಣ ಎಂದು ಪಂಜಾಬ್ ಬಿಜೆಪಿ ಆರೋಪಿಸಿದೆ.
ಭದ್ರತೆಯಿಂದ ತೆಗೆದುಹಾಕಲ್ಪಟ್ಟವರ ಹೆಸರುಗಳು ಹೇಗೆ ಸೋರಿಕೆಯಾಯಿತು ಎಂದು ಪಕ್ಷದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಪ್ರಶ್ನಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದು ರಾಜ್ಯ ಸರ್ಕಾರ ಮಾಡಿರುವ ಕೊಲೆ ಎಂದು ಅಕಾಲಿದಳದ ನಾಯಕ ದಲ್ಜಿತ್ ಸಿಂಗ್ ಚೀಮಾ ಆರೋಪಿಸಿದ್ದಾರೆ.
ಮತ್ತೊಂದೆಡೆ, ಪಂಜಾಬ್ ಸಿಎಂ ಭಗವಂತ್ ಮಾನ್ ಸಿಂಗ್ ಟ್ವೀಟ್ ಮಾಡಿ, ಸಿಧು ಮೂಸೆವಾಲಾ ಹತ್ಯೆಯ ಸುದ್ದಿಯಿಂದ ಆಘಾತ ಮತ್ತು ದುಃಖವಾಗಿದೆ. ಅದಕ್ಕೆ ಕಾರಣರಾದವರನ್ನು ಕೈ ಬಿಡಬಾರದು ಎಂದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಎಲ್ಲರೂ ಶಾಂತಿಯಿಂದ ಇರಬೇಕೆಂದು ಕರೆ ನೀಡಿದರು.
Brutal murder of Sidhu Moosewala is shocking. My profound condolences to the bereaved family.
Law and order has completely collapsed in Punjab. Criminals have no fear of law. @AAPPunjab government has miserably failed. Nobody is safe in Punjab!
— Capt.Amarinder Singh (@capt_amarinder) May 29, 2022
A high level enquiry should be ordered against the reckless @PunjabGovtIndia officers or leaders involved in sharing this document with the public.@BhagwantMann @CMOPb @ANI @thetribunechd @punjabkesari @ZeePunjabHH https://t.co/aDeljpY8Hr
— Manjinder Singh Sirsa (@mssirsa) May 28, 2022
सिद्धू मूसेवाला का क़त्ल बेहद दुःखद और स्तब्ध करने वाला है। मैंने अभी पंजाब के CM मान साहिब से बात की। दोषियों को सख़्त से सख़्त सजा दिलवायी जाएगी। मेरी सबसे बिनती है कि सब लोग हौसला रखें और शांति बनाए रखें। भगवान उनकी आत्मा को शांति दे। https://t.co/cYc2k7e30Y
— Arvind Kejriwal (@ArvindKejriwal) May 29, 2022
Nobody Safe In Punjab Says Amarinder Singh Slams Aap After Singer Shot Dead