424 ವಿವಿಐಪಿಗಳಿಗೆ ಮತ್ತೆ ಭದ್ರತೆ ಮರುಸ್ಥಾಪನೆ
ಚಂಡೀಗಢ: ರಾಜ್ಯದಲ್ಲಿ 424 ವಿವಿಐಪಿಗಳಿಗೆ ಭದ್ರತೆಯನ್ನು (Punjab To Restore Security For 424 VVIP) ಮರುಸ್ಥಾಪಿಸಲಾಗುವುದು ಎಂದು ಪಂಜಾಬ್ ಸರ್ಕಾರ ಇಂದು ಪ್ರಕಟಿಸಿದೆ. ಖ್ಯಾತ ಗಾಯಕ ಸಿಧು ಮುಸೇವಾಲಾ ಹತ್ಯೆಯ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪಂಜಾಬ್ನಲ್ಲಿ ವಿವಿಐಪಿಗಳಿಗೆ ಭದ್ರತೆಯನ್ನು ತೆರವು ಮಾಡಿದ ಮರುದಿನವೇ ಮುಸೇವಾಲಾ ಅವರನ್ನು ಹತ್ಯೆ ಮಾಡಲಾಗಿದೆ ಇದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಟೀಕೆಗೆ ಕಾರಣವಾಗಿತ್ತು.
ಈ ನಡುವೆ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಸಚಿವ ಒ.ಪಿ.ಸೋನಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದು ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ.
ಜೂನ್ 7 ರಿಂದ 424 ವಿವಿಐಪಿಗಳಿಗೆ ಭದ್ರತೆ ಒದಗಿಸುವುದಾಗಿ ಸರ್ಕಾರ ಹೇಳಿದೆ. ಜೂನ್ 6 ರಂದು ನಡೆಯಲಿರುವ ಆಪರೇಷನ್ ಬ್ಲೂಸ್ಟಾರ್ನ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಐಪಿಗಳಿಗೆ ಭದ್ರತೆಯನ್ನು ತೆಗೆದುಹಾಕಲಾಗಿದೆ ಎಂದು ಸರ್ಕಾರ ಇಂದು ನ್ಯಾಯಾಲಯಕ್ಕೆ ತಿಳಿಸಿದೆ.
Punjab To Restore Security For 424 VVIP From June 7