ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿದ ಮಹಾರಾಷ್ಟ್ರ ಸರ್ಕಾರ
ಬೆದರಿಕೆ ಪತ್ರದ ನಂತರ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮಹಾರಾಷ್ಟ್ರ ಸರ್ಕಾರ ಎರಡು ಪಟ್ಟು ಭದ್ರತೆಯನ್ನು ಹೆಚ್ಚಿಸಿದೆ. ಭಾನುವಾರ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರಗಳು ಬಂದಿವೆ. ಇದರಿಂದ ಎಚ್ಚೆತ್ತ ರಾಜ್ಯ ಗೃಹ ಇಲಾಖೆ ಅವರಿಗೆ ಭದ್ರತೆ ಹೆಚ್ಚಿಸಲು ನಿರ್ಧರಿಸಿದೆ.
ಸಲ್ಮಾನ್ ಖಾನ್ ಹಾಗೂ ಅವರ ತಂದೆಯನ್ನು ಕೊಲ್ಲುವುದಾಗಿ ಪುಂಡರು ಬೆದರಿಕೆ ಪತ್ರದಲ್ಲಿ ಎಚ್ಚರಿಸಿದ್ದಾರೆ. ಇದರಿಂದ ಎಚ್ಚೆತ್ತ ಸಲ್ಮಾನ್ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದಾರೆ.
ಪುಂಡರ ಪತ್ರದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಕ್ರೈಂ ಬ್ರಾಂಚ್ ಪೊಲೀಸರು ಸಲ್ಮಾನ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಪಂಜಾಬಿ ಗಾಯಕ ಸಿಧು ಮುಸೇವಾಲಾ ಹತ್ಯೆ ಬೆನ್ನಲ್ಲೇ ಬೆದರಿಕೆ ಪತ್ರಗಳು ಬೆಳಕಿಗೆ ಬಂದಿರುವುದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ..
Mumbai | A Crime Branch team leaves from the residence of actor Salman Khan
Salman Khan & his father Salim Khan received a threat letter, yesterday. Bandra Police has filed an FIR against an unidentified person & further probe is underway. The actor's security has been increased pic.twitter.com/kvgyTGfeV1
— ANI (@ANI) June 6, 2022
ಆದರೆ, ಈ ಹಿಂದೆಯೂ ಸಲ್ಮಾನ್ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಕೃಷ್ಣಮೃಗಗಳನ್ನು ದೈವಿಕ ಎಂದು ಪರಿಗಣಿಸುವ ಲಾರೆನ್ಸ್ ಬಿಷ್ಣೋಯ್, ಕೃಷ್ಣಮೃಗ ಬೇಟೆ ಪ್ರಕರಣದ ಆರೋಪಿ ಸಲ್ಮಾನ್ ನನ್ನು ಕೊಲ್ಲಲಾಗುವುದು ಎಂದು ಸಂಚಲನ ಮೂಡಿಸಿದ್ದ… ಸಲ್ಮಾನ್ ಹತ್ಯೆಗೆ ಆತನ ಗ್ಯಾಂಗ್ ನಡೆಸಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
Salman Khan Security Beefed Up After Threat Letter
Follow Us on : Google News | Facebook | Twitter | YouTube