ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ನಲ್ಲಿ ಲಿಖಿತ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಜೋಯಿಶ್ ಇರಾನಿ ಅವರು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಸ್ಮೃತಿ ಅವರ ಮಗಳು ನಡೆಸುತ್ತಿದ್ದ ರೆಸ್ಟೋರೆಂಟ್ ಪರವಾನಗಿಯನ್ನು ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿ ಜೂನ್ 2022 ರಂದು ತೆಗೆದುಕೊಳ್ಳಲಾಗಿದೆ, 13 ತಿಂಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಯ ಹೆಸರಿನಲ್ಲಿ ಪರವಾನಗಿ ಹೇಗೆ ತೆಗೆದುಕೊಳ್ಳಲು ಸಾಧ್ಯ? ಇದು ಅಕ್ರಮ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಗೋವಾದ ನಿಯಮದ ಪ್ರಕಾರ ಒಂದು ರೆಸ್ಟೋರೆಂಟ್ ಗೆ ಕೇವಲ ಒಂದು ಬಾರ್ ಲೈಸೆನ್ಸ್ ಇರಬೇಕು ಆದರೆ ಸಿಲ್ಲಿ ಸೋಲ್ಸ್ ಗೋವಾ ರೆಸ್ಟೋರೆಂಟ್ ಹೆಸರಿನಲ್ಲಿ ಎರಡು ಬಾರ್ ಲೈಸೆನ್ಸ್ ಇದೆ ಎಂದು ಪವನ್ ಆರೋಪಿಸಿದ್ದಾರೆ. ಸ್ಮೃತಿ ಇರಾನಿ ಭಾಗಿಯಾಗದೆ ಅವರ ಮಗಳು ಪರವಾನಗಿ ಪಡೆಯಲು ಸಾಧ್ಯವೇ? ಎಂದು ಆರೋಪಿಸಿದ್ದರು.
union minister smriti irani sent legal notice to pawan khera and jairam ramesh
Follow us On
Google News |
Advertisement