ಹುತಾತ್ಮ ಸಹೋದರನ ಪ್ರತಿಮೆಗೆ ರಾಖಿ ಕಟ್ಟಿದ ಮಹಿಳೆ
ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಸಹೋದರನ ಪ್ರತಿಮೆಗೆ ಮಹಿಳೆಯೊಬ್ಬರು ರಾಖಿ ಕಟ್ಟಿದರು
ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಸಹೋದರನ ಪ್ರತಿಮೆಗೆ ಮಹಿಳೆಯೊಬ್ಬರು ರಾಖಿ ಕಟ್ಟಿದರು. ಒಬ್ಬ ಮಹಿಳೆ ರಕ್ಷಾಬಂಧನದಂದು ತನ್ನ ತೋಳಿನ ಮೇಲೆ ಬಂದೂಕು ಹಿಡಿದಿರುವ ಸೈನಿಕನ ಉಡುಪಿನಲ್ಲಿರುವ ತನ್ನ ಸಹೋದರನ ಪ್ರತಿಮೆಗೆ ರಾಖಿ ಕಟ್ಟಿದ್ದಾಳೆ.
ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಆತನ ವೀರತ್ವವನ್ನು ಗುರುತಿಸಲು ರಾಜಸ್ಥಾನದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅವರ ಸಹೋದರಿ ಆ ಪ್ರತಿಮೆಗೆ ರಾಖಿ ಕಟ್ಟಿದರು.
ಇಂತಹ ದೃಶ್ಯಗಳು ಭಾರತವನ್ನು ಅಸಾಮಾನ್ಯವಾಗಿಸುತ್ತದೆ. ಅಣ್ಣನನ್ನು ಕಳೆದುಕೊಂಡ ನೋವು ಹಾಗೂ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹೆಮ್ಮೆ ಆಕೆಯನ್ನು ಏಕಕಾಲದಲ್ಲಿ ಕಾಡುತ್ತಿದೆ. ಧೈರ್ಯ ತುಂಬುವ ಅಣ್ಣನ ಕೈಗೆ ರಾಖಿ ಕಟ್ಟಲಾಗದೆ ಅವಳ ಮನಸ್ಸು ತಲ್ಲಣಗೊಂಡಿತ್ತು. ತನ್ನನ್ನು ತಾನು ನಿಯಂತ್ರಿಸಿಕೊಂಡು ಪ್ರತಿಮೆಯ ರೂಪದಲ್ಲಿ ನಿಂತಿದ್ದ ಆತನ ಕೈಗೆ ರಾಖಿ ಕಟ್ಟಿದ್ದಾಳೆ.
ಸುದ್ದಿ ಮಾಹಿತಿ ಸೇರಿದಂತೆ ಮನೋರಂಜನೆಗೆ ಕ್ಲಿಕ್ಕಿಸಿ ವೆಬ್ ಸ್ಟೋರೀಸ್
ರಾಜಸ್ಥಾನದ ಜೋಧಪುರದ ಶಹೀದ್ ಗಣಪತ್ ರಾಮ್ ಕಡ್ವಾಸ್ರಾ ಜಾಟ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದರು. 24 09 2017 ರಂದು ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾಗಿದ್ದರು’ ಎಂದು ವೇದಾಂತ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಇದನ್ನು ಓದಿದ ನೆಟ್ಟಿಗರು ತೀವ್ರ ಬೇಸರಗೊಂಡಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ದೇಶ ಸೇವೆ ಮಾಡುತ್ತಿರುವ ಯೋಧರಿಗೆ ನಮನ.
woman ties rakhi martyred brother statue
Follow us On
Google News |
Advertisement