ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಸರ್ಕಾರದಿಂದ ಬಿಗ್ ಅಪ್ಡೇಟ್! ಅಕ್ಕಿ ವಿಚಾರದಲ್ಲಿ ಮಹತ್ವದ ನಿರ್ಧಾರ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ (Congress Govt) ಜಾರಿಗೆ ತಂದಿರುವ ಯೋಜನೆಗಳಲ್ಲಿ ಬಹತೇಕ 4 ಯೋಜನೆಗಳ ಬಗ್ಗೆ ಪೂರ್ತಿ ಮಾಹಿತಿ ಇದ್ದು, ಶಕ್ತಿ ಯೋಜನೆ (Shakti Yojane), ಗೃಹಜ್ಯೋತಿ ಯೋಜನೆ (Gruha Jyothi Scheme) ಜಾರಿಗೆ ಬಂದಿದೆ.
ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಜಾರಿಗೆ ಬರುತ್ತಿದೆ. ಈ ಯೋಜನೆಯಲ್ಲಿ ಸರ್ಕಾರವು ಬಿಪಿಎಲ್ ಕಾರ್ಡ್ ಗಳಲ್ಲಿ (BPL Ration Card) ಮತ್ತು ಅಂತ್ಯೋದಯ ಕಾರ್ಡ್ ಗಳಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿತ್ತು.

ರಾಜ್ಯದ ಮಹಿಳೆಯರಿಗೆ ಬಿಗ್ ನ್ಯೂಸ್, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸ್ವತಃ ರಾಜ್ಯದ ಸಿಎಂ ಕೊಟ್ರು ಸಿಹಿ ಸುದ್ದಿ
ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಕೊಡುತ್ತದೆ, ಅದರ ಜೊತೆಗೆ ರಾಜ್ಯ ಸರ್ಕಾರದಿಂದ ಇನ್ನು 5 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ರಾಜ್ಯದಲ್ಲಿ ಮಳೆ ಇಲ್ಲ ಹಾಗೂ ಇನ್ನಿತರ ಕಾರಣಗಳಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯ ಆಗದೆ, 5 ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿ ಬದಲಾಗಿ ರೇಷನ್ ಕಾರ್ಡ್ ಮುಖ್ಯಸ್ಥರ ಖಾತೆಗೆ (Bank Account) ಹಣ ಹಾಕುವುದಾಗಿ ಸರ್ಕಾರ ಭರವಸೆ ನೀಡಿತು.
ಅನ್ನಭಾಗ್ಯ ಯೋಜೆನೆಯನ್ನು ಜಾರಿಗೆ ತರಬೇಕು ಎನ್ನುವಾಗ ಶುರುವಿನಲ್ಲಿ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿತ್ತಾದರು, ಮಳೆ ಸರಿಯಾಗಿಲ್ಲದೆ ಅಕ್ಕಿಯ ಬೆಳೆ ಸರಿಯಾಗಿ ಆಗಿರಲಿಲ್ಲ.
ಅಕ್ಕಿ ಉತ್ಪಾದನೆ ಕಡಿಮೆ ಇದ್ದ ಕಾರಣ, ರಾಜ್ಯ ಸರ್ಕಾರದಿಂದ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ನೀಡಲು ಆಗದೆ ಅದೇ ಹಣವನ್ನು ರೇಶನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಹಾಕುವುದಾಗಿ ತಿಳಿಸಿತು. ಆದರೆ ಈಗ ಆಂಧ್ರಪ್ರದೇಶದ ಸರ್ಕಾರದಿಂದ ಹೆಚ್ಜುವರಿ ಅಕ್ಕಿ ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
ರಾಜ್ಯದಲ್ಲಿ ಈ ವರ್ಷ ಮಳೆ ಚೆನ್ನಾಗಿ ಬರದ ಕಾರಣ ರೈತರು ಹಾಕಿದ ಭತ್ತಕ್ಕೆ ಒಳ್ಳೆಯ ಇಳುವರಿ ಬರದೇ, ನಷ್ಟವಾಗಿದೆ. ಈ ಕಾರಣಕ್ಕೆ ಭತ್ತದ ಉತ್ಪಾದನೆ ಕೂಡ ಇಳಿಕೆ ಆಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಕ್ಕಿಯ ಬೆಲೆ ಕೂಡ ಜಾಸ್ತಿ ಆಗಿದೆ..ಕೆಜಿಗೆ 50 ರೂಪಾಯಿ ಇದ್ದ ಸೋನಾಮಸೂರಿ ಅಕ್ಕಿ ಈಗ 60 ರೂಪಾಯಿ ಆಗಿದೆ..ಕೆಜಿಗೆ 70 ರೂಪಾಯಿ ಇದ್ದ ರಾಜಮುಡಿ ಅಕ್ಕಿ 74 ರೂಪಾಯಿ ಆಗಿದೆ.
ಇನ್ನು ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಕೊಡುವ ಅಕ್ಕಿಯ ಬೆಲೆ 30 ರೂಪಾಯಿಯಿಂದ 36 ರೂಪಾಯಿ ಆಗಿದೆ..ಇದರಿಂದ ಸಾಮಾನ್ಯ ವರ್ಗದ ಜನರಿಗೆ ಹೆಚ್ಚು ಕಷ್ಟ ಆಗುತ್ತಿದೆ.
ಮಳೆ ಇಲ್ಲದೆ ಬೆಳೆ ಕಡಿಮೆ ಆಗಿರುವುದರಿಂದ ಸರ್ಕಾರ ಜನರಿಗೆ ಸಹಾಯ ಆಗುವ ಹಾಗೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
Big Update on Annabhagya Yojane From Karnataka Govt