ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ, ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್
ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ (Ganga Kalyana Yojana), ಈ ಯೋಜನೆಗೆ ಸರ್ಕಾರದಿಂದ 3 ರಿಂದ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.
ರಾಜ್ಯ ಸರ್ಕಾರದಿಂದ ಶುರುವಾಗಿರುವ ಹೊಸ ಯೋಜನೆಯ ಹೆಸರು ಕರ್ನಾಟಕ ಗಂಗಾ ಕಲ್ಯಾಣ ಸ್ಕೀಮ್ 2022. ನಿಮ್ಮ ನೆಲದಲ್ಲಿ ಬೋರ್ ವೆಲ್ (Borewell) ಕೊರಸಬೇಕು ಎಂದರೆ, ಪಂಪ್ ಮೋಟರ್ ಗಳನ್ನು ವಿದ್ಯುಧಿಕರಣ ಮಾಡಲು ಸರ್ಕಾರದ ಆರ್ಥಿಕ ಸಹಾಯ ಪಡೆಯಬೇಕು ಎಂದರೆ ರಾಜ್ಯ ಸರ್ಕಾರದ ಈ ಯೋಜನೆಗೆ ತಪ್ಪದೇ ಅರ್ಜಿ ಸಲ್ಲಿಸಿ.
ಈ ಯೋಜನೆಯು ಹಳ್ಳಿಗಳಲ್ಲಿ ವಾಸಿಸುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ (Farmer Scheme) ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಕಷ್ಟದಲ್ಲಿರುವ ರೈತರು, ಅಲ್ಪಸಂಖ್ಯಾತ ರೈತರಿಗೆ ತಮ್ಮ ಜಮೀನಿನಲ್ಲಿ ಕೊಳವೆಬಾವಿ (Borewell) ಕೊರೆಸುವುದಕ್ಕೆ, ಮೋಟರ್ ಪಂಪ್ ವಿದ್ಯುಧಿಕರಣ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಸಹಾಯ ಸಿಗುತ್ತದೆ.
ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ (Ganga Kalyana Yojana), ಈ ಯೋಜನೆಗೆ ಸರ್ಕಾರದಿಂದ 3 ರಿಂದ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು. ಈ ಯೋಜನೆಯ ಸೌಲಭ್ಯ ಸಿಗುವುದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ..
ಈ ಯೋಜನೆಯ ಮೂಲಕ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ತುಮಕೂರು ಈ ಜಿಲ್ಲೆಗಳಿಗೆ 4 ಲಕ್ಷ ರೂಪಾಯಿಯವರೆಗು ಸಹಾಯಧನ ನೀಡುತ್ತದೆ.
ಬೇರೆ ಜಿಲ್ಲೆಗಳಿಗೆ 3 ಲಕ್ಷ ರೂಪಾಯಿ ಸಹಾಯಧನ ಕೊಡುವುದಕ್ಕೆ ರಾಜ್ಯಸರ್ಕಾರದಿಂದ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಗಂಗಾ ಕಲ್ಯಾಣ ಸ್ಕೀಮ್ ಗೆ ಬೇಕಿರುವ ಅಗತ್ಯಗಳು ಹೀಗಿದೆ..
ರಾಜ್ಯದ 28 ಲಕ್ಷ ಜನರಿಗೆ ಸಿಗೋದಿಲ್ಲ ಅನ್ನಭಾಗ್ಯ ಯೋಜನೆಯ 2ನೇ ಕಂತಿನ ಹಣ! ನಿಯಮ ಬದಲಾವಣೆ
*ಈ ಯೋಜನೆಯ ಫಲಾನುಭವಿಗಳಿಗೆ 1 ಎಕರೆ 20 ಗುಂಟೆ ಇಂದ 5 ಎಕರೆವರೆಗೂ ಜಮೀನು ಇರಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಈ ಜಿಲ್ಲೆಗಳಲ್ಲಿ ಇರುವ ಜಮೀನುಗಳ ವಿಸ್ತೀರ್ಣ ಕಡಿಮೆ ಇರುವುದರಿಂದ, ಈ ಜಿಲ್ಲೆಯವರು 1 ಎಕರೆ ಜಮೀನು ಹೊಂದಿರಬೇಕು.
*ಅರ್ಜಿ ಹಾಕುವ ರೈತರು ಕಡ್ಡಾಯವಾಗಿ ಕರ್ನಾಟಕದವರೇ ಆಗಿರಬೇಕು.
*ರೈತರು ಸಣ್ಣ ಅಥವಾ ಅತಿ ಸಣ್ಣ ರೈತರೇ ಆಗಿರಬೇಕು.
*ಹಳ್ಳಿಯಲ್ಲಿ ವಾಸ ಮಾಡುವ ಈ ರೈತನ ಕುಟುಂಬದ ವಾರ್ಷಿಕ ಆದಾಯ ₹96,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
*ಅರ್ಜಿ ಹಾಕುವವರ ವಯಸ್ಸು 18 ವರ್ಷದಿಂದ 55 ವರ್ಷಗಳ ಒಳಗೆ ಇರಬೇಕು.
ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು
*ರೈತರ ಕ್ಯಾಸ್ಟ್ ಸರ್ಟಿಫಿಕೇಟ್ (Caste Certificate)
*ಇನ್ಕನ್ ಸರ್ಟಿಫಿಕೇಟ್ (Income Certificate)
*ಆಧಾರ್ ಕಾರ್ಡ್ ಕಾಪಿ (Aadhaar Card)
*RTC ಕಾಪಿ
*ಸಣ್ಣ ಅಥವಾ ಅತಿಸಣ್ಣ ರೈತರ ಪ್ರಮಾಣಪತ್ರ
*ಬ್ಯಾಂಕ್ ಪಾಸ್ ಬುಕ್ ಕಾಪಿ (Bank Passbook)
*ಭೂಮಿಯ ಕಂದಾಯ ಪಾವತಿ ಮಾಡಿರುವ ರಶೀದಿ
*ಸ್ವಯಂ ಘೋಷಣೆಯ ಪತ್ರ
*ಖಾತರಿ ಕೊಡುತ್ತಿರುವವರ ಸ್ವಯಂ ಘೋಷಣೆ ಪತ್ರ.
ಅಗತ್ಯವಿರುವ ಮಾಹಿತಿಗಳು ಮತ್ತು ದಾಖಲೆಗಳ ಜೊತೆಗೆ ರೈತರು
https://kmdconline.karnataka.gov.in/Portal/login ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ (Ganga Kalyana Yojana) ಅರ್ಜಿ ಸಲ್ಲಿಸಬಹುದು.
Karnataka Ganga Kalyana Yojana Benefits Details and Direct link to Apply
Follow us On
Google News |