Karnataka NewsBangalore News
ಬೆಂಗಳೂರು: ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯಬೇಕು; ವರ್ತೂರು ಪ್ರಕಾಶ್
ಬೆಂಗಳೂರು / ಕೋಲಾರ: ಇನ್ನೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಮುಂದುವರಿಯಲಿ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ (Varthur Prakash) ಹೇಳಿದರು. ಮಂಗಳವಾರ ನಗರದಲ್ಲಿ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಿದ್ದರಾಮಯ್ಯ ಅವರು ಬಿಜೆಪಿಯಲ್ಲಿದ್ದರೂ ಕುರುಬ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದರು.
ಸಿದ್ದರಾಮಯ್ಯ ಅವರಿಗೆ ಸ್ವಂತ ಮನೆ ಇಲ್ಲ, ಅಂತಹ ವ್ಯಕ್ತಿ ಹೇಗೆ ಮುಡಾ ಮನೆಗಳಿಗೆ ನಿರೀಕ್ಷಿಸಬಹುದು. ಅವರ ಮೇಲೆ ದೂರು ನೀಡಿರುವುದು ವಿಪರ್ಯಾಸ, ಇದೊಂದು ರಾಜಕೀಯ ಕುತಂತ್ರವಷ್ಟೇ ಎಂದರು. ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ, ಅವರಿಲ್ಲದ ಕಾಂಗ್ರೆಸ್ ಪಕ್ಷ ಶೂನ್ಯ ಎಂದು ಅವರು ಹೇಳಿದರು.
Siddaramaiah should continue as CM for five more years: Varthur Prakash
Our Whatsapp Channel is Live Now 👇