ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಬಡವರಿಗೆ ಮಾತ್ರ ಈ ಸೌಲಭ್ಯ
ರ್ಕಾರದ ಜಾಗದಲ್ಲಿ ಮನೆ ಕಟ್ಟಿಸುತ್ತಿರುವವರಿಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಎನ್ನುವ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.
ಈಗಿನ ಕಾಲದಲ್ಲಿ ಸ್ವಂತ ಮನೆ (Own House) ಹೊಂದಿರುವುದು ಬಹಳ ಮುಖ್ಯ. ಆದರೆ ಸ್ವಂತ ಮನೆ ಕಟ್ಟಿಸುವುದು (House Construction) ಅಷ್ಟು ಸುಲಭದ ಕೆಲಸ ಅಲ್ಲ. ಒಂದು ಜಾಗ ಖರೀದಿ (Buy Land) ಮಾಡಿ, ಮನೆ ಕಟ್ಟಿಸುವುದು ಎಲ್ಲರ ಕನಸು. ಕೆಲವರು ಅದಕ್ಕಾಗಿ ಗೃಹ ಸಾಲ (Home Loan) ಪಡೆದು ಮನೆ ಕಟ್ಟಿಕೊಳ್ಳುತ್ತಾರೆ. ಆದರೆ ಅದಕ್ಕೂ ಅರ್ಹತೆ ಇಲ್ಲದವರು ಏನು ಮಾಡಲು ಸಾಧ್ಯ?
ಅದಕ್ಕಾಗಿ ಕೆಲವರು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮನೆ ಕಟ್ಟಿಸಿರುತ್ತಾರೆ. ಇದೀಗ ಈ ರೀತಿಯಾಗಿ ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಸುತ್ತಿರುವವರಿಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಎನ್ನುವ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ (Government Land) ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.
ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ರೇಷನ್ ಕಾರ್ಡ್ ಇರುವವರು ಈ ರೀತಿ ಚೆಕ್ ಮಾಡಿಕೊಳ್ಳಿ
ರಾಜ್ಯ ಸರ್ಕಾರದ ಹೊಸ ನಿರ್ಧಾರ ಇದಾಗಿದೆ. ಈಗ ಬಂದಿರುವ ಹೊಸ ಸರ್ಕಾರ ಇಂಥ ತೀರ್ಮಾನ ಮಾಡಿದ್ದು, ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಬಡತನದಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡಿ, ಆ ಜಾಗವನ್ನು ಅವರಿಗೆ ಸೂಕ್ತ ಎನ್ನುವ ಹಾಗೆ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ.
ಹಕ್ಕುಪತ್ರ ನೀಡಲು ಒಂದೇ ಒಂದು ಕಂಡೀಷನ್ ಇಟ್ಟಿದೆ ಸರ್ಕಾರ, ಆ ವ್ಯಕ್ತಿಯ ವಾರ್ಷಿಕ ಆದಾಯ ಎಷ್ಟಿದೆ ಎಂದು ಪರಿಶೀಲಿಸಿ, ಅವರು ಬಡವರು ಎಂದು ಗೊತ್ತಾದರೆ ಅಂಥವರಿಗೆ ಹಕ್ಕುಪತ್ರ ನೀಡಲಾಗುತ್ತದೆಯಂತೆ..
ಈ ವೇಳೆ 20*30 ಜಾಗದಲ್ಲಿ ಮನೆ ಕಟ್ಟಿರುವವರು, SC/ST ಜನರಿಗೆ 2500 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗರ ಜನರು 5000 ನೋಂದಣಿ ಶುಲ್ಕ ಕಟ್ಟಬೇಕಾಗುತ್ತದೆ.
10ನೇ ತರಗತಿ ಪಾಸ್ ಆಗಿದ್ರೆ ಸಾಕು, 30 ಸಾವಿರ ಸಂಬಳ ಸಿಗೋ ಸರ್ಕಾರಿ ಕೆಲಸ! ಇಂದೇ ಅರ್ಜಿ ಹಾಕಿ
ಇಷ್ಟು ಹಣ ಪಾವತಿ ಮಾಡಿದರೆ, ನೀವು ಮನೆ ಕಟ್ಟಿಕೊಂಡಿರುವ ಜಾಗವನ್ನು ನಿಮ್ಮ ಹೆಸರಿಗೆ ಸರ್ಕಾರವೇ ರಿಜಿಸ್ಟರ್ ಮಾಡಿಸಿಕೊಡುತ್ತದೆ ಎಂದು ಹೇಳಲಾಗುತ್ತಿದೆ. ಈ ಸೌಕರ್ಯ ಪಡೆಯಲು ನೀವು ಮನೆ ಕಟ್ಟಿಸಿ 10 ವರ್ಷಗಳಿಂದ 30 ವರ್ಷಗಳ ಸಮಯ ಆಗಿರಬೇಕು. 10 ಸಾವಿರ ಜನರಿಗೆ ಈ ರೀತಿ ಹಕ್ಕು ಪತ್ರ ನೀಡಲು ಸರ್ಕಾರ ತೀರ್ಮಾನ ಮಾಡಲಾಗಿದ್ದು, ಬಡಜನರಿಗೆ ಇದು ನಿಜಕ್ಕೂ ಗುಡ್ ನ್ಯೂಸ್ ಆಗಿದೆ.
The government has given good news to those who have built a house on government land
Follow us On
Google News |