Sandalwood News

15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?

Actress Saritha: ಸ್ನೇಹಿತರೇ ಅದೊಂದು ಕಾಲದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಡಾಕ್ಟರ್ ರಾಜಕುಮಾರ್ (Dr Rajkumar) ಅವರಂತಹ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ನಟಿಸಿ ಅತಿ ಚಿಕ್ಕ ವಯಸ್ಸಿನಲ್ಲಿ ಬಹು ದೊಡ್ಡ ಬೇಡಿಕೆಯನ್ನು ಪಡೆದುಕೊಂಡಂತಹ ಸಾಕಷ್ಟು ನಟಿಯರಲ್ಲಿ ಸರಿತಾ ಅವರು ಕೂಡ ಒಬ್ಬರು.

ಅತಿ ಚಿಕ್ಕ ವಯಸ್ಸಿಗೆ ಅಂದರೆ 15 ವರ್ಷಕ್ಕೆ ವೆಂಕಟಸುಬ್ಬಯ್ಯನವರೊಂದಿಗೆ ಬಾಲ್ಯ ವಿವಾಹವಾದರೂ, ಇವರಿಬ್ಬರ ನಡುವೆ 20 ವರ್ಷಗಳ ವಯಸ್ಸಿನ ಅಂತರವಿತ್ತು. ಆಡುವಂತಹ ವಯಸ್ಸಿನಲ್ಲಿ ಮಕ್ಕಳು ಎತ್ತು ಅವರ ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು ನೀಡಿದರೆ ಅದು ಹೆಣ್ಣಿನ ಮನಸ್ಸಿನ ಮೇಲೆ ಆಗಾವದಂತಹ ಪರಿಣಾಮ ಬೀರುತ್ತದೆ ಎಂಬುದರ ಅರಿವು ನಿಮ್ಮೆಲ್ಲರಿಗೂ ಇದ್ದೇ ಇರುತ್ತದೆ.

Kannada Actress Saritha

ಅವಕಾಶ ಸಿಗದೇ ಇದ್ದುದೇ ಸಂಪತ್ ಸಾವಿಗೆ ಕಾರಣವಾಯ್ತಾ? ಪಾಪ ಸಾವಿಗೂ ಮುನ್ನ ಪಟ್ಟ ಪಾಡು ಗೊತ್ತಾದ್ರೆ ಕಣ್ಣಲ್ಲಿ ನೀರು ಬರುತ್ತೆ..

ನಟಿ ಸರಿತಾ (Actress Saritha) ಚೆನ್ನೈನಿಂದ ಮತ್ತೆ ತಮ್ಮ ಆಂಧ್ರಪ್ರದೇಶದ ತವರು ಮನೆಗೆ ವಾಪಸ್ ಬಂದುಬಿಡುತ್ತಾರೆ, ಆ ಸಂದರ್ಭದಲ್ಲಿ ವೆಂಕಟಸುಬ್ಬಯ್ಯನವರು ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ, ಅವಳನ್ನು ವಾಪಸ್ ಮನೆಗೆ ಕಳಸಿ ಕೊಡಬೇಕೆಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ.

ಅಂತಿಮವಾಗಿ ಕೋರ್ಟ್ ಇದು ಬಾಲ್ಯ ವಿವಾಹ ಇದಕ್ಕೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಇವರ ಅರ್ಜಿಯನ್ನು ರದ್ದುಗೊಳಿಸಿತು.

ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಉಂಟಾದಂತಹ ಏರಿಳಿತಗಳನ್ನು ಕಂಡು ಸರಿತಾ ಅವರು ಈ ಸಂದರ್ಭದಲ್ಲಿ ಪಾರ್ವತಮ್ಮನವರ ಸಹಾಯದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ.

ಅತಿ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಸರಿತಾ ಅವರು ಇತರೆ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಲು ಪ್ರಾರಂಭ ಮಾಡಿದಾಗ ನಟ ಮುಖೇಶ್ ಅವರ ಪರಿಚಯವಾಗುತ್ತೆ.

Sarath Babu: ನಟ ಶರತ್ ಬಾಬುಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು!

ಇವರಿಬ್ಬರ ಪರಿಚಯ ಸ್ನೇಹವಾಗಿ ಮುಂದಿನ ದಿನಗಳಲ್ಲಿ ಪ್ರೀತಿಯಾಗಲು ಹೆಚ್ಚಿನ ಸಮಯ ಹಿಡಿಯಲ್ಲ 1988 ರಲ್ಲಿ ಮನೆಯವರೆಲ್ಲರನ್ನು ಒಪ್ಪಿಸಿ ಸರಿತಾ ಮತ್ತು ಮುಖೇಶ್ ಪ್ರೀತಿಸಿ ಮದುವೆಯಾದರು‌. ಮದುವೆಯಾದ ಆರಂಭಿಕ ದಿನಗಳಲ್ಲಿ ಮುಖೇಶ್ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ದಿನ ಕಳೆದಂತೆ ಮುಖೇಶ್ ಮನೆಗೆ ಹೆಚ್ಚಾಗಿ ಕುಡಿದುಕೊಂಡು ಬರಲು ಪ್ರಾರಂಭ ಮಾಡುತ್ತಾರೆ.

Actress Saritha with Mukhesh

ಮನೆಯಲ್ಲಿ ತಂದು ತಮ್ಮ ಹೆಂಡತಿಗೆ ಹಿಂಸೆ ನೀಡುತ್ತಾರೆ, ಅಷ್ಟೇ ಅಲ್ಲದೆ ಹುಡುಗಿಯರನ್ನು ಕರೆದುಕೊಂಡು ಬಂದು ಅಸಭ್ಯ ವರ್ತನೆ ಮಾಡಿದ್ದೂ ಇದೆ. ಇದರಿಂದ ಬೇಸತ್ತು ಯಾರ ಸಹವಾಸವು ಬೇಡ ಎಂದು ಸರಿತಾ ಅವರು ದುಬೈಗೆ ಹಾರಿದರು.

ಆನಂತರ 2017ರಲ್ಲಿ ಮುಖೇಶ್ ಅವರಿಂದ ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಾರೆ. ಅದರಂತೆ 2011ರಲ್ಲಿ ವಿಚ್ಛೇದನ ಪಡೆದು ತಮ್ಮ ಪತಿಯಿಂದ ದೂರಗಿ ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ಈ ಸಿನಿಮಾ ನಾನೇ ಮಾಡಬೇಕು ಅಂತ ಹಠ ಹಿಡಿದ ರಾಜ್-ವಿಷ್ಣು ಇಬ್ಬರ ಜಗಳದಲ್ಲಿ ಲಾಭ ಪಡೆದುಕೊಂಡ ಮೂರನೇ ವ್ಯಕ್ತಿ ಯಾರು? ಆ ಸಿನಿಮಾ ಯಾವುದು ಗೊತ್ತೇ?

ಒಟ್ಟಾರೆ ನಟಿ ಸರಿತಾ ಅವರ ಜೀವನ ಬಹಳಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದೆ, ಆದರೂ ದೃತಿಗೆಡದೆ ಅವರು ಎಲ್ಲವನ್ನೂ ಎದುರಿಸುತ್ತಾ ಬಂದರು. ಇಷ್ಟವಿಲ್ಲದ ಪತಿಯಿಂದ ಸ್ವಲ್ಪ ದಿವಸ ಕಷ್ಟಗಳು, ಇಷ್ಟಪಟ್ಟ ಪತಿಯಿಂದ ಇನ್ನೊಂದು ರೀತಿಯ ಕಷ್ಟಗಳು…. ಆಕೆಯ ಜೀವನೇ ಕಷ್ಟಗಳ ಸಾಗರ ಎಂದರೆ ತಪ್ಪಾಗಲಾರದು. ಆದರೆ ಈಗಲೂ ಸರಿತಾ ಅವರು ತೆರೆ ಮೇಲೆ ಕಾಣಿಸಿಕೊಂಡರೆ, ಒಂದಿಂಚೂ ಕದಲದೆ ತೆರೆ ಮೇಲೆ ಅವರನ್ನೇ ನೋಡಬೇಕೆನಿಸುವ ಅಮೋಘ ಅಭಿನಯ ಅವರದು….

Do you know where actress Saritha is now, Here is the Saritha Life Story

Our Whatsapp Channel is Live Now 👇

Whatsapp Channel

Related Stories