ಯಾರೂ ತಿರುಗಿ ನೋಡದಂತಹ ಸಂದರ್ಭದಲ್ಲಿ ವಿಷ್ಣು ದಾದಾ ವಿನೋದ್ ರಾಜ್ ಗೆ ಮಾಡಿದ ಸಹಾಯವೇನು ಗೊತ್ತಾ?
ಯಾರೂ ತಿರುಗಿ ನೋಡದಂತಹ ಸಂದರ್ಭದಲ್ಲಿ ವಿಷ್ಣು ದಾದಾ (Dr Vishnuvardhan) ವಿನೋದ್ ರಾಜ್ ಗೆ (Kannada Actor Vinod Rajkumar) ಮಾಡಿದ ಸಹಾಯವೇನು ಗೊತ್ತಾ? ಸುಖ ಸುಮ್ನೆ ಯಾರನ್ನು ಕರ್ಣನಿಗೆ ಹೋಲಿಸಲ್ಲ!! ತಿಳಿದರೆ ಭೇಷ್ ಅಂತೀರಾ ಕಣ್ರೀ !!
ಸ್ನೇಹಿತರೆ 50 ದಶಕಗಳಿಗೂ ಹೆಚ್ಚಿನ ಕಾಲದಿಂದ ಕನ್ನಡ ಸಿನಿಮಾರಂಗದಲ್ಲಿ (Kannada Cinema) ಸಕ್ರಿಯರಾಗಿರುವಂತಹ ಲೀಲಾವತಿ (Senior Actress Leelavathi) ಅಮ್ಮನವರು ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ಅಮೋಘ ಅಭಿನಯದ ಪರಿಚಯವನ್ನು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ರಂಗಗಳಿಗೂ ಮೂಡಿಸಿದ್ದಾರೆ.
ಇನ್ನು ತನ್ನಂತೆ ತನ್ನ ಮಗನು ಕೂಡ ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಬೇಕು ಎಂಬ ಮಹಾದಾಸೆಯನ್ನು ಹೊಂದಿದಂತಹ ಲೀಲಾವತಿ ಅಮ್ಮ ಮಗನ ಬೆನ್ನ ಹಿಂದೆ ನಿಂತು ಅವರ ಪ್ರತಿ ಹೆಜ್ಜೆಗೂ ಸಪೋರ್ಟ್ ಮಾಡಿದರು.
ಅದರಂತೆ ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರಾಂಡ್ ಎಂಟ್ರಿಕೊಟ್ಟು ತಮ್ಮ ಅಭಿನಯ ಹಾಗೂ ಡಾನ್ಸ್ ಮೂಲಕ ಅದೆಷ್ಟೋ ಕನ್ನಡಿಗರ ಹೃದಯ ಗೆದ್ದಂತಹ ವಿನೋದ್ ರಾಜ್…
ಅಂದು ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದ್ದಾಗ ಯಾರು ತಿರುಗಿ ನೋಡದಂತಹ ಸಂದರ್ಭದಲ್ಲಿ ಡಾಕ್ಟರ್ ವಿಷ್ಣುವರ್ಧನ್ ತಾಯಿ ಮಗನಿಗೆ ಅದೆಂತಹ ಸಹಾಯ ಮಾಡಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸಿನಿಮಾ ರಂಗದಲ್ಲಿ ವಿನೋದ್ ರಾಜ್ ಅವರಿಗೆ ಆದಂತಹ ಕೆಲವು ಅವಮಾನಗಳಿಂದಾಗಿ ಬಣ್ಣದ ಬದುಕೇ ಬೇಡ ಎಂದು ದೂರ ಉಳಿದಿದ್ದಂತಹ ವಿನೋದ್ ರಾಜ್ ಅವರು ಮತ್ತೆ ಕನ್ನಡದ ಕಂದ ಎಂಬ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಾರೆ. ಅಲ್ಲದೆ ಈ ಒಂದು ಸಿನಿಮಾಗೆ ಸ್ವತಃ ಲೀಲಾವತಿ ಅಮ್ಮನವರೆ ಹಣವನ್ನು ಹೂಡಿಕೆ ಮಾಡಿದರು.
ಈ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ ಎನ್ನುವಾಗ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿತ್ತು, ಸಿನಿಮಾ ಬಿಡುಗಡೆ ಮಾಡಕೂಡದು ಎಂಬ ಸುದ್ದಿಯು ಕೂಡ ಕೇಳಿಬಂದಿತ್ತು. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರ ಪರವಾಗಿ ನಿಂತು ಸಿನಿಮಾದ ಜವಾಬ್ದಾರಿಯನ್ನೆಲ್ಲ ತಮ್ಮ ಮೇಲೆ ಹೊತ್ತು ಕನ್ನಡದ ಕಂದ ಸಿನಿಮಾದ ಅದ್ದೂರಿ ರಿಲೀಸ್ ಗೆ ಕಾರಣರಾದರು.
ಈ ಕಾರಣದಿಂದ ಅದೆಷ್ಟೋ ಕಡೆಗಳಲ್ಲಿ ವಿನೋದ್ ರಾಜ್ ಅವರು ನಮ್ಮ ಕನ್ನಡ ಸಿನಿಮಾ ರಂಗಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರಂತಹ ಕರ್ಣ ಎಂದು ಬಂದಿಲ್ಲ ಮತ್ತೆಂದು ಬರೋದು ಇಲ್ಲ ಎಂದು ಹೇಳಿದ್ದುಂಟು.
Dr Vishnuvardhan helps to Vinod Raj went viral