ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡ ರಿಷಬ್ ಶೆಟ್ಟಿ: ‘Appu Sir is our emotion’
Appu Sir is our emotion: ಕಾಂತಾರ ಮತ್ತು ಭವಿಷ್ಯದಲ್ಲಿ ತಾನು ಮಾಡುವ ಎಲ್ಲವನ್ನೂ ಪುನೀತ್ ರಾಜ್ಕುಮಾರ್ಗೆ ಅರ್ಪಿಸಲು ಬಯಸುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
Appu Sir is our emotion: ಕಾಂತಾರ ಮತ್ತು ಭವಿಷ್ಯದಲ್ಲಿ ತಾನು ಮಾಡುವ ಎಲ್ಲವನ್ನೂ ಪುನೀತ್ ರಾಜ್ಕುಮಾರ್ಗೆ (Puneeth Rajkumar) ಅರ್ಪಿಸಲು ಬಯಸುತ್ತೇನೆ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದ್ದಾರೆ.
ರಿಷಬ್ ಶೆಟ್ಟಿ ಕನ್ನಡದ ಆಕ್ಷನ್-ಥ್ರಿಲ್ಲರ್ ಕಾಂತಾರ ಚಿತ್ರದಲ್ಲಿನ (Kantara Cinema) ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಅವರು ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡರು.
ಇದನ್ನೂ ಓದಿ: ಲಕ್ಷ ಲಕ್ಷ ಲಾಸ್ ಮಾಡ್ಕೊಂಡ ಸೋನು ಗೌಡ! ಏನಾಯ್ತು
“ಅಪ್ಪು ಸರ್ ನಮ್ಮ ಭಾವನೆ (Appu Sir is our emotion). ನಾನು ಇದನ್ನು ಮೊದಲೇ ಹೇಳಿದ್ದೇನೆ, ನಾನು ಕಾಂತಾರವನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ, ಜೊತೆಗೆ ಮುಂದೆ ನಾನು ಏನೇ ಮಾಡಿದರೂ ಅದನ್ನೆಲ್ಲ ಅಪ್ಪು ಸರ್ ಗೆ ಅರ್ಪಿಸುತ್ತೇನೆ’ ಎನ್ನುತ್ತಾರೆ ರಿಷಬ್.
ಈ ಹಿಂದೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಪುನೀತ್ ರಾಜ್ಕುಮಾರ್ಗೆ ಕಾಂತಾರ ಆಫರ್ ಮಾಡಿದ್ದರು. “ಹೌದು, ನಾವು (ಅದರ ಬಗ್ಗೆ) ಮಾತನಾಡಿದ್ದೆವು ಮತ್ತು ಇನ್ನೂ ಎರಡು ವಿಷಯಗಳು ಸಹ ಚರ್ಚೆ ಆಗಿತ್ತು, ಅದರ ನಡುವೆ ಕಾಂತಾರ ಬಗ್ಗೆಯೂ ಚರ್ಚಿಸಿದ್ದೆವು. ಆದರೆ ಡೇಟ್ ಕ್ಲಾಶ್ನಿಂದಾಗಿ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಅದೇ ಸಂಭಾಷಣೆಯ ಸಮಯದಲ್ಲಿ, ಶೆಟ್ಟಿ ಅವರು ಕಮಲ್ ಹಾಸನ್ (Kamal Haasan) ಅವರ ಮೇಲಿನ ಅಭಿಮಾನದ ಬಗ್ಗೆ ತೆರೆದುದಿಟ್ಟರು.
“ಅವರು ದೇವರು (Kamal Haasan). ಅವರನ್ನು ವಿವರಿಸಲು ನನ್ನ ಬಳಿ ಸಾಕಷ್ಟು ಪದಗಳಿಲ್ಲ. ಅವರ ಅಭಿನಯದ ದೊಡ್ಡ ಅಭಿಮಾನಿ ನಾನು. ಅವರು ಅಭಿನಯದ ದೇವರು,” ಎಂದು ಶೆಟ್ಟಿ ನುಡಿದರು.
ಇದನ್ನೂ ಓದಿ: ರಶ್ಮಿಕಾ ಬಾಲಿವುಡ್ ಭರವಸೆ ಹುಸಿ, ಬಂದ ದಾರಿಗೆ ಸುಂಕವಿಲ್ಲ
ಕಾಂತಾರ ತುಳು ಆವೃತ್ತಿ
ಏತನ್ಮಧ್ಯೆ, ಕಾಂತಾರ ತಯಾರಕರು ಚಿತ್ರದ ತುಳು ಆವೃತ್ತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ತಾತ್ಕಾಲಿಕವಾಗಿ ಯೋಜಿಸಿದ್ದಾರೆ ಎನ್ನಲಾಗಿದೆ. ಚಿತ್ರವು ಪ್ರಸ್ತುತ ತುಳು ಭಾಷೆಗೆ ಡಬ್ ಆಗುತ್ತಿದೆ ಮತ್ತು ಅದರ ಹೆಚ್ಚಿನ ಭಾಗವು ಈಗಾಗಲೇ ಮುಗಿದಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ.
Rishab Shetty remembers Puneeth Rajkumar: ‘Appu Sir is our emotion’